Advertisement

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

12:41 AM May 01, 2024 | Team Udayavani |

ಕಾಸರಗೋಡು: ಕಣ್ಣೂರು ಸಮೀಪದ ಕಣ್ಣಾಪುರ ಚೆರುಕುನ್ನು ಕುನ್ನೆಚ್ಚೇರಿ ಪೆಟ್ರೋಲ್‌ ಬಂಕ್‌ ಪರಿಸರದಲ್ಲಿ ಎ. 29ರಂದು ರಾತ್ರಿ 10.15ಕ್ಕೆ ಕಾರು ಹಾಗೂ ಗ್ಯಾಸ್‌ ಸಿಲಿಂಡರ್‌ ಹೇರಿಕೊಂಡು ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಕಾಸರಗೋಡಿನ ಒಂದೇ ಕುಟುಂಬದ ಮಗು ಸಹಿತ ಐವರು ಮೃತಪಟ್ಟಿದ್ದಾರೆ.

Advertisement

ಕಾರು ಚಲಾಯಿಸುತ್ತಿದ್ದ ನೀಲೇಶ್ವರ ಸಮೀಪದ ಕಾಲಿಚ್ಚಾನಡ್ಕ ಶಾಸ್ತಾಂಪಾರ ಶ್ರೀಶೈಲದ ಕೆ.ಎನ್‌. ಪದ್ಮಕುಮಾರ್‌(59), ಸಂಬಂಧಿಕರಾದ ಬಂದಡ್ಕ ಸಮೀಪದ ಭೀಮನಡಿ ಮಂಟಪಂ ಕಮ್ಮಾಡತ್‌ ಚೂರಿಕ್ಕಾಡನ್‌ ಸುಧಾಕರನ್‌ (52), ಅವರ ಪತ್ನಿ ಅಜಿತಾ (35), ಅಜಿತಾ ಅವರ ತಂದೆ ಪುತ್ತೂರು ಕೊಳುಮ್ಮಲ್‌ ಕೃಷ್ಣನ್‌ (65), ಅಜಿತಾ ಅವರ ಸಹೋದರ ಅಜಿತ್‌ ಅವರ ಪುತ್ರ ಆಕಾಶ್‌ ಮೃತಪಟ್ಟವರು.

ಕಾರಿನಲ್ಲಿದ್ದವರು ಕಣ್ಣೂರಿನಿಂದ ನೀಲೇಶ್ವರದತ್ತ ಪ್ರಯಾಣಿಸುತ್ತಿದ್ದ ಸಂದರ್ಭ ಎದುರುಗಡೆಯಿಂದ ಬಂದ ಲಾರಿ ಮುಖಾಮುಖಿ ಢಿಕ್ಕಿ ಹೊಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next