Advertisement

Kasaragod; ರೈಲಿನಿಂದ ಬಿದ್ದು ಯುವತಿ ಸಾವು

01:37 AM Jan 07, 2024 | Team Udayavani |

ಕಾಸರಗೋಡು: ಬೇಕಲ-ಕೋಟಿಕುಳಂ ಮಧ್ಯೆ ಮಾಸ್ತಿಕುಂಡಿನಲ್ಲಿ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲುಗಾಡಿಯಿಂದ ಬಿದ್ದು ವಯನಾಡು ಕಾವಂಡುಂಡ್‌ ಮಂಞ್ಞಮಲೆಯಿಲ್‌ ಕರಿಯೋಡ್‌ ವೀಟಿಲ್‌ನ ಜೋಸೆಫ್‌ ಆಲಿಯಾಸ್‌ ಜೋಯ್‌ ಅವರ ಪುತ್ರಿ ಐಶ್ವರ್ಯಾ ಜೋಸೆಫ್‌ (30) ಸಾವಿಗೀಡಾದರು.

Advertisement

ಕಲ್ಲಿಕೋಟೆಯ ಮಾರ್ಕೆಟಿಂಗ್‌ ಸಂಸ್ಥೆಯೊಂದರ ಹ್ಯೂಮನ್‌ ರಿಸೋರ್ಸ್‌ ಮೆನೇಜರ್‌ ಆಗಿರುವ ಐಶ್ವರ್ಯಾ ಜೋಸೆಫ್‌ ರೈಲು ಗಾಡಿಯಿಂದ ಬಿದ್ದ ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ರಕ್ಷಿಸಲು ಸಾಧ್ಯವಾಗಲಿಲ್ಲ.

ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next