Advertisement

Kasaragod ಅಪರಾಧ ಸುದ್ದಿಗಳು: ಲಾರಿ-ಸ್ಕೂಟರ್‌ ಢಿಕ್ಕಿ : ಯುವಕನಿಗೆ ಗಾಯ

09:20 PM May 03, 2023 | Team Udayavani |

ಲಾರಿ-ಸ್ಕೂಟರ್‌ ಢಿಕ್ಕಿ : ಯುವಕನಿಗೆ ಗಾಯ
ಕುಂಬಳೆ: ಮಂಜತ್ತಡ್ಕದಲ್ಲಿ ಲಾರಿ ಹಾಗು ಸ್ಕೂಟರ್‌ ಢಿಕ್ಕಿ ಹೊಡೆದು ಉಪ್ಪಳ ಗೇಟ್‌ ನಿವಾಸಿ ಅಬ್ದುಲ್ಲವಾಸ್‌(19) ಗಾಯಗೊಂಡಿದ್ದಾರೆ. ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಮೊಬೈಲ್‌ನಲ್ಲಿ ಮಾತನಾಡುತ್ತಾ ಬೈಕ್‌ ಚಲಾಯಿಸಿದ ಯುವಕನ ಬಂಧನ
ಕುಂಬಳೆ: ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಾ ಬೈಕ್‌ ಚಲಾಯಿಸಿದ ಆರೋಪದಲ್ಲಿ ಆರಿಕ್ಕಾಡಿ ಗ್ರೀನ್‌ ಮಹಲ್‌ನ ಮಹರೂಪ್‌(20)ನನ್ನು ಪೊಲೀಸರು ಶಿರಿಯ ಸೇತುವೆ ಪರಿಸರದಿಂದ ಬಂಧಿಸಿದ್ದಾರೆ.

388.8 ಲೀಟರ್‌ ಮದ್ಯ ವಶಕ್ಕೆ
ಬದಿಯಡ್ಕ: ನೀರ್ಚಾಲು ಗ್ರಾಮದ ಕಿಳಿಂಗಾರು ಜಂಕ್ಷನ್‌ ಪರಿಸರದಿಂದ ಬದಿಯಡ್ಕ ಅಬಕಾರಿ ರೇಂಜ್‌ ಅಧಿಕಾರಿಗಳು ಸ್ವಿಫ್ಟ್‌ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 388.8 ಲೀಟರ್‌ ಮದ್ಯ ವಶಪಡಿಸಿಕೊಂಡಿದೆ. ಕಾರಿನಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ಮದ್ಯ ವಶಪಡಿಸಿಕೊಂಡ ಸಂಬಂಧ ಮುಟ್ಟತ್ತೋಡಿ ಪಟ್ರಮೂಲೆಯ ಕೊçಪಾಡಿ ವೀಟಿಲ್‌ನ ಅಬ್ದುಲ್‌ ರಹಿಮಾನ್‌(31) ವಿರುದ್ಧ ಕೇಸು ದಾಖಲಿಸಲಾಗಿದೆ.

ಕಾರು ಢಿಕ್ಕಿ : ಮಹಿಳೆಗೆ ಗಾಯ
ಕುಂಬಳೆ: ಮುಗುರೋಡ್‌ನ‌ಲ್ಲಿ ಕಾರು ಢಿಕ್ಕಿ ಹೊಡೆದು ಸ್ಕೂಟರ್‌ ಸವಾರಿ ನಡೆಸುತ್ತಿದ್ದ ಜಿಲ್ಲಾ ಸಹಕಾರಿ ಆಸ್ಪತ್ರೆಯ ಸಿಬ್ಬಂದಿ ಪೂರ್ಣಿಮ ಕ್ರಾಸ್ತಾ ಗಾಯಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next