Advertisement

Karwar ;ಮತಾಂತರದ ವದಂತಿ, ಕ್ರಿಶ್ಚಿಯನ್ನರ ಪ್ರಾರ್ಥನೆಗೆ ಅಡ್ಡಿ:ಪೊಲೀಸರಿಂದ ಪರಿಸ್ಥಿತಿ ತಿಳಿ

07:55 PM Sep 03, 2023 | Team Udayavani |

ಕಾರವಾರ: ಕ್ರಿಶ್ಚಿಯನ್ ಸಮುದಾಯಕ್ಕೆ ಹಿಂದೂಗಳ ಮತಾಂತರ ಮಾಡುತ್ತಿದ್ದ ಆರೋಪದ ಮೇರೆಗೆ ಪ್ರಾರ್ಥನೆ ನಡೆಯುತಿದ್ದ ಸ್ಥಳಕ್ಕೆ ಮುತ್ತಿಗೆ ಹಾಕಿ ಸ್ಥಳೀಯರು ಗಲಾಟೆ ನಡೆಸಿರುವ ಘಟನೆ ಸದಾಶಿವಗಡದ ಚಿತ್ತಾಕುಲದಲ್ಲಿ ನಡೆದಿದೆ.

Advertisement

ಚಿತ್ತಾಕುಲದ ಕ್ರಿಶ್ ಹಾಲ್‌ನಲ್ಲಿ ಶ್ಯಾಮ್ ನಾಯಕ ಎಂಬುವವರು ಪ್ರಾರ್ಥನೆ ಆಯೋಜಿಸಿದ್ದರೆನ್ನಲಾಗಿದೆ. ಈ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಶ್ಯಾಮ್ ಗೋಕರ್ಣ ಮತಾಂತರಗೊಂಡಿದ್ದರೆನ್ನಲಾಗಿದ್ದು, ಈ ಪ್ರಾರ್ಥನೆಯಲ್ಲಿ ಬಹುತೇಕ ಹಿಂದೂಗಳೇ ಸೇರಿದ್ದರಿಂದ ಸ್ಥಳೀಯರು ಮತಾಂತರ ನಡೆಯುತ್ತಿರುವುದಾಗಿ ಆರೋಪಿಸಿ ಪ್ರಾರ್ಥನೆ ನಡೆಯುತ್ತಿದ್ದ ಕೇಂದ್ರಕ್ಕೆ ಮುತ್ತಿಗೆ ಹಾಕಿದರು. ಆದರೆ ಪ್ರಾರ್ಥನೆ ಮಾಡುವುದು ನಮ್ಮ ಹಕ್ಕು. ಹಲವು ವರ್ಷ ದಿಂದ ಪ್ರಾರ್ಥನೆ ಮಾಡುತ್ತಿದ್ದೇವೆ. ಮತಾಂತರ ಮಾಡುತ್ತಿದ್ದೇವೆ ಎಂಬುದು ಸುಳ್ಳು ಮಾಹಿತಿ. ಪ್ರಾರ್ಥನೆ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕ್ರಿಶ್ ಹಾಲ್ ನಲ್ಲಿ ಪ್ರಾರ್ಥಿಸುತ್ತಿದ್ದವರು ವಾದಿಸಿದರು‌ .

‌ಸ್ಥಳಕ್ಕೆ ಆಗಮಿಸಿದ ಚಿತ್ತಾಕುಲಾ ಠಾಣಾ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಮತಾಂತರ ಮಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಲ ಸ್ಥಳೀಯರು ಆಗ್ರಹಿಸಿದರು. ಆದರೆ ಅಲ್ಲಿ ಮತಾಂತರ ನಡೆಯುತ್ತಿರಲಿಲ್ಲ ಎಂದು ಖಚಿತ ಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಲಿಲ್ಲ. ಸಮಾಜದಲ್ಲಿ ಇನ್ನು ಮುಂದೆ ತಪ್ಪು ಮಾಹಿತಿ ಹರುಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next