Advertisement

Karwar; ಕಾರು ಢಿಕ್ಕಿಯಾಗಿ ಬಿಜೆಪಿ ಮುಖಂಡ ಸ್ಥಳದಲ್ಲೇ ಸಾವು

10:17 PM Oct 08, 2023 | Team Udayavani |

ಕಾರವಾರ: ಸದಾಶಿವಗಡದಲ್ಲಿ ರಾಂಗ್ ಸೈಡ್‌ನಲ್ಲಿ ಬರುತ್ತಿದ್ದ ಬೈಕ್‌ಗೆ ಕಾರು ಹಿಂದಿನಿಂದ ಢಿಕ್ಕಿ ಹೊಡೆದ‌ ಪರಿಣಾಮ‌ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರುವ ಘಟನೆ ನಡೆದಿದೆ. ಮೃತಪಟ್ಟ ಬೈಕ್ ಸವಾರ ಕಾರವಾರ ತಾಲೂಕು ಗ್ರಾಮೀಣ ಭಾಗದ ಬಿಜೆಪಿ ಕಾರ್ಯದರ್ಶಿ, ದೇವಬಾಗದ ತುಕಾರಾಮ್ ಚೆಂಡೇಕರ್ (42) ಎಂದು ಗುರುತಿಸಲಾಗಿದೆ.

Advertisement

ಕಾರವಾರ ತಾಲೂಕಿನ‌ ಸದಾಶಿವಗಡದ ಹೆದ್ದಾರಿ 66ರಲ್ಲಿ ಅಪಘಾತ ನಡೆದಿದೆ. ಬೈಕ್ ಗೋವಾ ಕಡೆಯಿಂದ ಕಾರವಾರ ಕಡೆ ವೇನಲ್ಲಿ ಸಾಗುತ್ತಿತ್ತು. ಈ ವೇಳೆ ಗೋವಾದಿಂದ ಕಾರವಾರಕ್ಕೆ ಬರುತ್ತಿದ್ದ ಕಾರು-ಬೈಕ್ ಗೆ ಹಿಂಬದಿಯಿಂದ ಢಿಕ್ಕಿಯಾಗಿದೆ.

ಅವಘಡಕ್ಕೆ ಬೈಕ್ ಸವಾರನ ನಿರ್ಲಕ್ಷ್ಯತನವೋ ಅಥವಾ ಕಾರು ಚಾಲಕನ ನಿರ್ಲಕ್ಷ್ಯ ವೋ ಎಂದು ಚಿತ್ತಾಕುಲಾ ಪೊಲೀಸರು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next