Advertisement

ಭಾರತ “ಎ’ತಂಡಕ್ಕೆ ಕನ್ನಡಿಗ ಕರುಣ್‌ ನಾಯರ್‌ ನಾಯಕ

07:05 AM Sep 11, 2017 | Team Udayavani |

ನವದೆಹಲಿ: ಭಾರತ ಎ ಮತ್ತು ನ್ಯೂಜಿಲೆಂಡ್‌ ಎ ನಡುವಿನ ನಾಲ್ಕು ದಿನದ 2 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವನ್ನು ಕನ್ನಡಿಗ ಕರುಣ್‌ ನಾಯರ್‌ ಮುನ್ನಡೆಸಲಿದ್ದಾರೆ. ಉಳಿದಂತೆ ಕನ್ನಡಿಗರಾದ ಆರ್‌.ಸಮರ್ಥ್, ಕೆ.ಗೌತಮ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

Advertisement

ಕರುಣ್‌ ನಾಯರ್‌ ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟೆಸ್ಟ್‌ ಸರಣಿ ಆಡಿದ್ದರು. ಆ ನಂತರ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಸದ್ಯ ಕೆಪಿಎಲ್‌ನಲ್ಲಿ ಆಡುತ್ತಿದ್ದಾರೆ. ಅದೇ ರೀತಿ ಆರ್‌.ಸಮರ್ಥ್ ಮತ್ತು ಕೆ.ಗೌತಮ್‌ ಕೆಪಿಎಲ್‌ನಲ್ಲಿ ಆಡುತ್ತಿದ್ದಾರೆ. ಇತ್ತೀಚೆಗೆ ಲಂಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಆಡಿರುವ ವೇಗಿ ಶಾದೂìಲ್‌ ಠಾಕೂರ್‌ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಎರಡೂ ಪಂದ್ಯಗಳು ವಿಜಯವಾಡದಲ್ಲಿ ನಡೆಯಲಿವೆ. ಸೆ.23ರಿಂದ ಮೊದಲ ಪಂದ್ಯ, ಸೆ.30ರಿಂದ 2ನೇ ಪಂದ್ಯ ಆರಂಭವಾಗಲಿದೆ. ಆ ನಂತರ ಉಭಯ ರಾಷ್ಟ್ರಗಳ ನಡುವೆ 5 ಏಕದಿನ ಪಂದ್ಯಗಳು ನಡೆಯಲಿವೆ.

ತಂಡ: ಕರುಣ್‌ ನಾಯರ್‌(ನಾಯಕ), ಪ್ರೀಯಾಂಕ್‌ ಪಾಂಚಲ್‌, ಆರ್‌.ಸಮರ್ಥ್, ಸುದೀಪ್‌ ಚಟರ್ಜಿ, ಶ್ರೇಯಾಸ್‌ ಐಯ್ಯರ್‌, ಅಂಕಿತ್‌ ಬವೆ°, ಹನುಮ ವಿಹಾರಿ, ರಿಶಭ್‌ ಪಂತ್‌(ವಿಕೆಟ್‌ ಕೀಪರ್‌), ಶಹºದ್‌ ನದೀಮ್‌, ಕೆ.ಗೌತಮ್‌, ನವದೀಪ್‌ ಸೈನಿ, ಶಾದೂìಲ್‌ ಠಾಕೂರ್‌, ಮೊಹಮ್ಮದ್‌ ಸಿರಾಜ್‌, ಅಂಕಿತ್‌ ರಜಪೂತ್‌.

Advertisement

Udayavani is now on Telegram. Click here to join our channel and stay updated with the latest news.

Next