Advertisement

ಸಿಬಿಐ ಕಸ್ಟಡಿಗೆ ಕಾರ್ತಿ: ತನಿಖಾ ಸಂಸ್ಥೆಯ ವಿಶೇಷ ಕೋರ್ಟ್‌ ಆದೇಶ

07:30 AM Mar 02, 2018 | |

ಹೊಸದಿಲ್ಲಿ /ಚೆನ್ನೈ: ಐಎನ್‌ಎಕ್ಸ್‌ ಮಾಧ್ಯಮ ಸಂಸ್ಥೆ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಕಾರ್ತಿ ಚಿದಂಬರಂ ಅವರನ್ನು ಐದು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಲಾಗಿದೆ. ದಿಲ್ಲಿಯ ಸಿಬಿಐ ವಿಶೇಷ ಕೋರ್ಟ್‌ ಗುರುವಾರ ಈ ಆದೇಶ ಹೊರಡಿಸಿದೆ. ಕಾರ್ತಿಗೆ ಮನೆಯ ಊಟ ನೀಡಬಾರದು ಎಂದು ಹೇಳಿರುವ ವಿಶೇಷ ಕೋರ್ಟ್‌ ನ್ಯಾಯಾಧೀಶ ಸುನಿಲ್‌ ರಾಣಾ, “ಕಾರ್ತಿ ವಿರುದ್ಧದ ಸಾಕ್ಷ್ಯಗಳು ಆಘಾತ ತರುವಂತಿವೆ’ ಎಂದಿದ್ದಾರೆ.

Advertisement

ಮಾಜಿ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಅವರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಿ ವಿಶೇಷ ಕೋರ್ಟ್‌ಗೆ ಹಾಜರುಪಡಿಸಿದ್ದರು. ಒಂದು ದಿನದ ಮಟ್ಟಿಗೆ ಕೋರ್ಟ್‌ ಸಿಬಿಐ ವಶಕ್ಕೆ ನೀಡಿತ್ತು. ಗುರುವಾರ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಮತ್ತೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ವೇಳೆ ಸಿಬಿಐ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ತುಷಾರ್‌ ಮೆಹ್ತಾ “ಈ ಪ್ರಕರಣದಲ್ಲಿ ಯಾವುದೇ ರೀತಿ ರಾಜಕೀಯ ಸೇರಿಲ್ಲ. ಸಂವಿಧಾನದ 21ನೇ ವಿಧಿಯಂತೆಯೇ ತನಿಖೆ ನಡೆಯುತ್ತಿದೆ’ ಎಂದರು. ಬಂಧನ ರಾಜಕೀಯ ಪ್ರತೀಕಾರ ಎಂಬ ಕಾಂಗ್ರೆಸ್‌ ನಾಯಕರ ಟೀಕೆಗೆ ಎಎಸ್‌ಜಿ ಕೋರ್ಟ್‌ನಲ್ಲಿ ಈ ಸಮರ್ಥನೆ ನೀಡಿದರು.

ವಾದ -ಪ್ರತಿವಾದ ಆಲಿಸಿದ ಬಳಿಕ, ಸಿಬಿಐ ವಶಕ್ಕೆ ಒಪ್ಪಿಸಿ ಆದೇಶ ನೀಡುವ ಸಂದರ್ಭ ನ್ಯಾಯಾಧೀಶ ಸುನಿಲ್‌ ರಾಣಾ, “ಕಾರ್ತಿ ವಿದೇಶಕ್ಕೆ ಹೋಗಿದ್ದಾಗ ಏನು ಮಾಡಿದ್ದಾರೆ ಎನ್ನುವುದಕ್ಕೆ ಮಹತ್ವದ ಸಾಕ್ಷ್ಯಗಳಿವೆ. ಪ್ರಕರಣದಲ್ಲಿ ಹಣ ಬಂದಿರುವ ಖಾತೆಯನ್ನು ಅವರು ಸ್ಥಗಿತಗೊಳಿಸಿದ್ದಾರೆ’ ಎಂದಿದ್ದಾರೆ.

ಸರ, ಉಂಗುರ ಧರಿಸಲು ಅನುಮತಿ: ಐದು ದಿನಗಳ ಸಿಬಿಐ ವಶಕ್ಕೆ ಒಪ್ಪಿಸಿ ಕೋರ್ಟ್‌ ಆದೇಶ ಪ್ರಕಟಿಸುತ್ತಲೇ, ತನಿಖಾ ಸಂಸ್ಥೆ ಅಧಿಕಾರಿಗಳು ಕಾರ್ತಿ ಚಿದಂಬರಂ ಕೊರಳಲ್ಲಿದ್ದ ಚಿನ್ನದ ಸರ ಮತ್ತು ಬೆರಳಲ್ಲಿದ್ದ ಉಂಗುರ ತೆಗೆಯುವಂತೆ ಸೂಚಿಸಿದರು. ಅದನ್ನು ಅನುಸರಿಸಲು ನಿರಾಕರಿಸಿದ ಕಾರ್ತಿ, ತಮ್ಮ ಪರ ವಕೀಲರತ್ತ ನೋಡಿದರು. ಅಭಿಷೇಕ್‌ ಮನು ಸಿಂ Ì ಈ ಬಗ್ಗೆ ಆಕ್ಷೇಪಿಸಿ “ಧಾರ್ಮಿಕ ಕಾರಣಗಳಿಂದ ಅದನ್ನು ಧರಿಸಲಾಗಿದೆ’ ಎಂದು ನ್ಯಾಯಾಧೀಶರಲ್ಲಿ ಅರಿಕೆ ಮಾಡಿಕೊಂಡರು. ಅದಕ್ಕೆ ನ್ಯಾಯಾಧೀಶರು ಒಪ್ಪಿಕೊಂಡರು.

ದಿನವಿಡೀ ಚಿದು ಮೌನ
ಪುತ್ರನ ಬಂಧನದ ಹಿನ್ನೆಲೆಯಲ್ಲಿ  ಈ ವರೆಗೆ ಮಾಜಿ ಸಚಿವ ಚಿದಂಬರಂ ಮಾಧ್ಯಮದವರ ಜತೆಗೆ ಮಾತನಾಡದೆ ಮೌನ ವಹಿಸಿದ್ದರು. ಕೋರ್ಟ್‌ ಆವರಣದಲ್ಲೂ ಅವರು ಪ್ರತಿಕ್ರಿಯೆ ನೀಡಲಿಲ್ಲ. ವಿಶೇಷ ಕೋರ್ಟ್‌ ಆದೇಶ ಪ್ರಕಟಿಸಿದಾಗ ಕಾರ್ತಿ ಚಿದಂಬರಂ ಅವರು “ನನ್ನ ವಿರುದ್ಧದ ಆರೋಪಗಳು ಸುಳ್ಳಾಗುವ ದಿನಗಳು ಬರುತ್ತವೆ’ ಎಂದು ಕೂಗಿ ಹೇಳಿದರು ಎಂದು “ಎನ್‌ಡಿಟಿವಿ’ ವರದಿ ಮಾಡಿದೆ. ಈ ನಡುವೆ ಸಫ‌ªರ್‌ಜಂಗ್‌ ಆಸ್ಪತ್ರೆಯ ವೈದ್ಯಾಧಿಕಾರಿಗಳು ಕಾರ್ತಿ ಅವರನ್ನು ಬುಧವಾರ ರಾತ್ರಿ ಹೃದ್ರೋಗ ತಪಾಸಣ ವಿಭಾಗಕ್ಕೆ ಕಳುಹಿಸಿದ್ದರು. ಗುರುವಾರ ಬೆಳಗ್ಗೆಯೇ ಅವರನ್ನು ಮತ್ತೆ ಸಿಬಿಐ ಕೇಂದ್ರ ಕಚೇರಿಗೆ ಕರೆತರಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next