Advertisement

RCB; ಲಯ ಇಲ್ಲದೆ ಒದ್ದಾಡುತ್ತಿದ್ದಾಗ ಕಾರ್ತಿಕ್‌ ಸಲಹೆಯಿಂದ ನೆರವು: ವಿರಾಟ್ ಕೊಹ್ಲಿ

01:31 PM May 25, 2024 | Team Udayavani |

ಬೆಂಗಳೂರು: ಐಪಿಎಲ್‌ ನಿವೃತ್ತಿ ಪಡೆದುಕೊಂಡಿರುವ ದಿನೇಶ್‌ ಕಾರ್ತಿಕ್‌ರನ್ನು ಹೊಗಳಿರುವ ಕೊಹ್ಲಿ, “2022ರಲ್ಲಿ ನಾನು ಲಯ ಕಳೆದುಕೊಂಡು ಒದ್ದಾಡುತ್ತಿದ್ದಾಗ, ಕಾರ್ತಿಕ್‌ ನೀಡಿದ ಸಲಹೆ ಬಹಳ ನೆರವಾಯಿತು’ ಎಂದಿದ್ದಾರೆ.

Advertisement

“ಮೈದಾನದ ಹೊರಗೆ ನಾನು ಕಾರ್ತಿಕ್‌ ಜತೆಗೆ ಸಾಕಷ್ಟು ಗಮನಾರ್ಹ ಸಂಭಾಷಣೆಗಳನ್ನು ನಡೆಸಿದ್ದೇನೆ. ಅವರು ತುಂಬಾ ತಿಳಿವಳಿಕೆ ಉಳ್ಳವರಾಗಿದ್ದಾರೆ’ ಎಂದು ಆರ್‌ ಸಿಬಿ ಮಾಡಿರುವ ಕಾರ್ತಿಕ್‌ ಗುಣಗಾನ ವಿಡಿಯೋದಲ್ಲಿ ಕೊಹ್ಲಿ ಮಾತನಾಡಿದ್ದಾರೆ.

“ಕಾರ್ತಿಕ್‌ ಜತೆಗಿನ ಎಲ್ಲಾ ಮಾತುಕತೆಗಳನ್ನು ನಾನು ಸಾಕಷ್ಟು ಆನಂದಿಸಿದ್ದೇನೆ. 2022ರಲ್ಲಿ ನಾನು ಐಪಿಎಲ್‌ ನಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಈ ವೇಳೆ ನನ್ನ ಬಗ್ಗೆ ನಾನೇ ಅರಿಯಲಾಗದ ವಿಷಯಗಳನ್ನು ಕಾರ್ತಿಕ್‌ ಮನವರಿಕೆ ಮಾಡಿಕೊಟ್ಟರು. ಇದು ನನಗೆ ಸಹಾಯ ಮಾಡಿತು’ ಎಂದು ಕೊಹ್ಲಿ ಹೇಳಿದ್ದಾರೆ. ಅಲ್ಲದೇ ಕಾರ್ತಿಕ್‌ ಓರ್ವ ಪ್ರತಿಭಾನ್ವಿತ ಮತ್ತು ಪ್ರಾಮಾ ಣಿಕ ಆಟಗಾರನಾಗಿದ್ದಾರೆ. ಭವಿಷ್ಯದಲ್ಲಿ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ಕಣ್ಣೀರಾದ ಪಳ್ಳಿಕಲ್‌

ಕಾರ್ತಿಕ್‌  ಗುಣಗಾನ ವಿಡಿಯೋದಲ್ಲಿ ದೀಪಿಕಾ ಪಳ್ಳಿಕಲ್‌ಕಾರ್ತಿಕ್‌ ಬಗ್ಗೆ ಮಾತನಾಡುವಾಗ ಗದ್ಗದಿತರಾಗಿದ್ದಾರೆ. ಕಾರ್ತಿಕ್‌ ಅವರ ಕ್ರಿಕೆಟ್‌ ಬದುಕಿನ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿರುವ ದೀಪಿಕಾ, ಈ ವೇಳೆ ಕಣ್ಣೀರು ಹಾಕಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next