Advertisement

Rajasthan: ಕರ್ಣಿ ಸೇನಾ ಮುಖ್ಯಸ್ಥನ ಹಂತಕರನ್ನು ಎನ್‌ಕೌಂಟರ್‌ ಮಾಡಿ… ಕಾಂಗ್ರೆಸ್ ನಾಯಕ

01:35 PM Dec 06, 2023 | Team Udayavani |

ರಾಜಸ್ಥಾನ: ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆಯ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿ ಕೊಲ್ಲಬೇಕು ಎಂದು ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಖಚರಿಯಾವ ಬುಧವಾರ ಹೇಳಿಕೆ ನೀಡಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿದ ಖಚರಿಯಾವ “ಇದು ತುಂಬಾ ಗಂಭೀರವಾದ ವಿಷಯ, ಜನರು ಶಾಂತಿಯಿಂದ ಇರಬೇಕು, ಈ ಕೃತ್ಯವನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ನೆಮ್ಮದಿ ಕೆಡಿಸಬಾರದು ಎಂದ ಅವರು ಗೊಗಮೆಡಿಯ ಹಂತಕರನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಬೇಕು ಎಂದು ಹೇಳಿದ್ದಾರೆ.

ಮಂಗಳವಾರ ಗೋಗಮೆಡಿ ಮನೆಯಲ್ಲಿದ್ದ ಸಂದರ್ಭ ಇಬ್ಬರು ಅಪರಿಚಿತರು ಮಾತನಾಡುವ ನೆಪದಲ್ಲಿ ಮನೆಗೆ ಬಂದು ಗುಂಡು ಹಾರಿಸಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದರು.

ಬುಧವಾರ, ಘಟನೆಯ ಕುರಿತು ರಾಜ್ಯಾದ್ಯಂತ ‘ಬಂದ್’ ಗೆ ಕರೆ ನೀಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕರ್ಣಿ ಸಮುದಾಯದವರು ರಾಜಸ್ಥಾನದಾದ್ಯಂತ ಪ್ರತಿಭಟನೆಗಳನ್ನು ನಡೆಸಿದರು,

ಏತನ್ಮಧ್ಯೆ, ಆರೋಪಿಗಳ ಪೈಕಿ ಇಬ್ಬರು ಆರೋಪಿಗಳನ್ನು ರೋಹಿತ್ ರಾಥೋಡ್, ಮಕ್ರಾನಾ ನಾಗೌರ್ ನಿವಾಸಿ ಮತ್ತು ನಿತಿನ್ ಫೌಜಿ ಹರಿಯಾಣದ ಮಹೇಂದ್ರಗಾತ್ ನಿವಾಸಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next