Advertisement

ವಲಸಿಗರ ಸದಾ ಕೈ ಬೀಸಿ ಕರೆಯುವ ಕರ್ನಾಟಕ

11:01 AM Oct 27, 2017 | |

ನವದೆಹಲಿ: ಜಗತ್ತಿನಲ್ಲಿ ವಲಸೆಯ ವರಸೆ ವಿಪರೀತವಾಗಿ ಬಿಟ್ಟಿದೆ. ರಾಷ್ಟ್ರ ರಾಷ್ಟ್ರಗಳ ನಡುವೆ ಮಾತುಗೆಡು ವುದಕ್ಕೂ, ದೇಶವೊಂದರಲ್ಲಿ ಪರ ವಿರೋಧದ ಚರ್ಚೆ ಗಳನ್ನು ಹುಟ್ಟುಹಾಕುವುದಕ್ಕೂ ವಲಸೆ ಕಾರಣವಾಗು ತ್ತಿದೆ. ರಾಷ್ಟ್ರಗಳ ನಡುವಷ್ಟೇ ಅಲ್ಲ, ರಾಜ್ಯಗಳ ನಡುವಿನಲ್ಲಿ ನಡೆಯುವ ವಲಸೆಯೂ ಅಷ್ಟೇ ಪ್ರಮಾಣದಲ್ಲಿ ಪರ-ವಿರೋಧವನ್ನು ಹುಟ್ಟುಹಾಕುತ್ತಿದೆ.

Advertisement

ಗಮನಾರ್ಹ ಅಂಶವೇನೆಂದರೆ ಕರ್ನಾಟಕ, ಆಂಧ್ರಪ್ರದೇಶಗಳಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಿದ್ದು, ಎರಡೂ ರಾಜ್ಯಗಳು ಪ್ರಮುಖವೆನಿಸಿಕೊಂಡಿವೆ. ಈ ನಿಟ್ಟಿನಲ್ಲಿ ಭಾರತದ ರಾಜ್ಯಗಳ ನಡುವೆಯೂ ವಲಸೆ ಹೆಚ್ಚುತ್ತಿದೆ ಎನ್ನುತ್ತಿರುವ ವರ್ಲ್ಡ್ ಎಕನಾಮಿಕ್‌ ಫೋರಂನ ವರದಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತದಲ್ಲಿನ ಆಂತರಿಕ ವಲಸೆ ಪ್ರಕ್ರಿಯೆ ವಾರ್ಷಿಕವಾಗಿ 4.5 ಪ್ರತಿಶತದಷ್ಟು ಬೆಳೆಯುತ್ತಾ ಸಾಗುತ್ತಿದೆ.

2001- 2011ರ ಅವಧಿಯಲ್ಲಿನ ಆಂತರಿಕ ವಲಸೆಯ ಪ್ರಮಾಣ ಅದರ ಹಿಂದಿನ ದಶಕಕ್ಕಿಂತ ದ್ವಿಗುಣವಾಗಿದೆ ಎಂದಿದೆ. ಅಂದರೆ ವರ್ಷವೊಂದರಲ್ಲಿ 50ರಿಂದ 60 ಲಕ್ಷ ಜನರು ದೇಶದಲ್ಲಿ ನೆಲೆ ಬದಲಿಸುತ್ತಿದ್ದಾರೆ. ವಲಸೆಗೆ ಆರ್ಥಿಕ, ಸಾಮಾಜಿಕ ಮತ್ತು ಸೃಜನಶೀಲ ಅವಕಾಶಗಳು ಕಾರಣ ಎನ್ನುತ್ತಾರೆ ವರ್ಲ್ಡ್ ಎಕನಾಮಿಕ್‌ ಫೋರಂನ ಅಧಿಕಾರಿ  ಎಲೀಸ್‌ ಚಾರ್ಲ್ಸ್‌.

ವಲಸಿಗರಿಗೆ ಭಾರತದಲ್ಲಿ ಅನ್ವರ್ಥವಾಗಿ ನಿಲ್ಲುವುದು ಬೆಂಗಳೂರು ಸೇರಿದಂತೆ, ದೇಶದ ಇನ್ನಿತರ ಮೆಟ್ರೋ ಸಿಟಿಗಳು. ನಗರದಲ್ಲಿನ ವಲಸೆ ಪ್ರಮಾಣದಲ್ಲಿ 3ನೇ ಒಂದು ಭಾಗ ದಷ್ಟು ವಲಸೆ ಆಂಧ್ರ, ಕರ್ನಾಟಕದಲ್ಲಿ ಇದೆ. ಸಹಜವಾಗಿಯೇ ತಲಾವಾರು ಆದಾಯ ಕಡಿಮೆಯಿರುವ ರಾಜ್ಯಗಳಾದ ಬಿಹಾರ ಮತ್ತು ಉತ್ತರ ಪ್ರದೇಶದಿಂದ ಹೊರ ಹೋಗುವವರ ಸಂಖ್ಯೆ ಅಧಿಕವಿದ್ದರೆ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿಗೆ ವಲಸೆ ಬರುವವರ ಪ್ರಮಾಣ ಹೆಚ್ಚು. 

ಅಂತಾರಾಷ್ಟ್ರೀಯ ವರ್ಸಸ್‌ ಅಂತರಾಜ್ಯ: ಅಂತಾರಾಷ್ಟ್ರೀಯ ವಲಸಿಗರಿಗಿಂತ ಅಂತಾರಾಜ್ಯ ವಲಸಿಗರ ಸಂಖ್ಯೆ ಮೂರು ಪಟ್ಟು ಹೆಚ್ಚು ಎನ್ನುತ್ತದೆ ವಿಶ್ವಸಂಸ್ಥೆ. ಜಾಗತಿಕವಾಗಿ ಇಂದು 24.4 ಕೋಟಿ ವಲಸಿಗರಿದ್ದರೆ ಅದಕ್ಕಿಂತ ಮೂರುಪಟ್ಟು ಹೆಚ್ಚು ವಲಸಿಗರ ವಿನಿಮಯ ರಾಜ್ಯಗಳ ನಡುವೆ ಆಗುತ್ತಿದೆ. ಆದರೆ ಅಂತರ್‌ ರಾಜ್ಯ ವಲಸೆಯ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿಲ್ಲ. 

Advertisement

ರಾಜಕೀಯ ಚರ್ಚೆಗಳಲ್ಲೂ, ನೀತಿ ನಿರೂಪಣೆಯಲ್ಲೂ ಈ ವಿಷಯವನ್ನು ಕಡೆಗಣಿಸಲಾಗುತ್ತಿದೆ. ವಿಶ್ವಸಂಸ್ಥೆಯೂ ಇದೇ ಮಾತನ್ನು ಪುನರುಚ್ಚರಿಸುತ್ತಿದೆ. ರಾಜಕೀಯ ನೀತಿಗಳಲ್ಲಿ ಆಂತರಿಕ ವಲಸಿಗರ ವಿಚಾರವನ್ನು ಕಡೆಗಣಿಸುತ್ತಿರುವುದರಿಂದ ರಾಜ್ಯಗಳ ಜನರ ನಡುವೆ ಬಿಕ್ಕಟ್ಟು ಹೆಚ್ಚುತ್ತಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು. 

ಪುಣೆ ನಂಬರ್‌ 1
ಸದ್ಯ ಏಷ್ಯಾದಲ್ಲಿ ಹೆಚ್ಚು ವಲಸೆ ಎದುರಿಸುತ್ತಿರುವ ನಗರ ಮಹಾರಾಷ್ಟ್ರದ ಪುಣೆ ಮತ್ತು ಗುಜರಾತ್‌ನ ಸೂರತ್‌. ಸಹಜವಾಗಿಯೇ ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ವೇಗವಾಗಿ ಸಾಗುತ್ತಿರುವ ಆಂಧ್ರ ಪ್ರದೇಶ ಮತ್ತು ಕರ್ನಾಟಕಕ್ಕೂ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ವ್ಯಕ್ತಿಯೊಬ್ಬನ ಆರ್ಥಿಕ ಪರಿಸ್ಥಿತಿಗೂ ವಲಸೆಗೂ ಅವಿನಾಭಾವ ಸಂಬಂಧವಿದೆ ಎನ್ನುವು ದನ್ನು ಸಾರುತ್ತಿದೆ ಈ ವರದಿ.

ಉದಾಹರಣೆಗೆ ಬಿಹಾರದ ತಲಾ ಆದಾಯ ಸೋಮಾಲಿಯಾಕ್ಕೆ ಅಜಮಾಸು ಸಮನಾಗಿದೆ(520 ಡಾಲರ್‌) ಅಲ್ಲದೇ, ಇನ್ನು ಒಬ್ಬ ಮಹಿಳೆಯ ಮಕ್ಕಳ ಜನನ ಪ್ರಮಾಣ 3.4ರಷ್ಟಿದೆ. ಇನ್ನೊಂದೆಡೆ ದಕ್ಷಿಣ ರಾಜ್ಯ ಕೇರಳದ ತಲಾ ಆದಾಯ ಬಿಹಾರಕ್ಕಿಂತ ನಾಲ್ಕು ಪಟ್ಟು ಹೆಚ್ಚು. ಮಕ್ಕಳ ಜನನ ಪ್ರಮಾಣ ಒಬ್ಬ ಮಹಿಳೆಗೆ 1.6 ರಷ್ಟಿದೆ ಎನ್ನುತ್ತದೆ ಈ ವರದಿ.  

Advertisement

Udayavani is now on Telegram. Click here to join our channel and stay updated with the latest news.

Next