Advertisement
ವಿದರ್ಭ ದಿನದಾಟವನ್ನು ಆತಂಕದಿಂದಲೇ ಆರಂಭಿಸಿತ್ತು. ಮೊದಲೆರಡು ವಿಕೆಟ್ಗಳು ಕೇವಲ 31 ರನ್ ಆದಾಗ ಉದುರಿದ್ದವು. ನಾಯಕ ಫೈಜ್ ಫಜಲ್ ಕೇವಲ 22 ರನ್ ಮಾಡಿ ಔಟಾದರು. ಬಳಿಕ 116 ರನ್ ಆಗುವ ವರೆಗೆ ವಿಕೆಟ್ ಕಳೆದುಕೊಳ್ಳಲಿಲ್ಲ. ಆಗ 41 ರನ್ ಗಳಿಸಿದ್ದ ವಾಸಿಂ ಜಾಫರ್ ವಿಕೆಟ್ ಉದುರಿತು. ಇಲ್ಲಿಂದ ಮತ್ತೆ ಸ್ಥಿರತೆ ಕಾಪಾಡಿಕೊಂಡ ವಿದರ್ಭ ಒಂದೊಂದೇ ರನ್ ಗಳಿಸುತ್ತ 166ರ ವರೆಗೆ ತಲುಪಿತು. ಆಗ ವಿದರ್ಭಕ್ಕೆ ನಿಜವಾದ ಆಘಾತ ಎದುರಾಯಿತು.ವಿದರ್ಭ ಪರ ಆಡುತ್ತಿರುವ ಕರ್ನಾಟಕದ ಗಣೇಶ್ ಸತೀಶ್ 57 ರನ್ ಗಳಿಸಿ ಔಟಾಗುವುದರೊಂದಿಗೆ ಕುಸಿತ ಆರಂಭವಾಯಿತು. ವಿನಯ್ ಪಡೆ ಹಿಡಿತ ಸಾಧಿಸಿತು.
ಗಣೇಶ್ ಸತೀಶ್ ಮತ್ತು ಅಕ್ಷಯ್ ವಾಡ್ಕರ್ ನೆರವಿನೊಂದಿಗೆ ವಿದರ್ಭ ಉತ್ತಮ ಮೊತ್ತದತ್ತ ಹೆಜ್ಜೆ ಹಾಕುತ್ತಿದ್ದಾಗ ಪರಿಸ್ಥಿತಿಯನ್ನು ಹಿಡಿತಕ್ಕೆ ತಂದಿದ್ದು ಕರ್ನಾಟಕದ ವೇಗದ ಬೌಲರ್ ಅಭಿಮನ್ಯು ಮಿಥುನ್ ಹಾಗೂ ಸ್ಪಿನ್ನರ್ ಜಗದೀಶ್ ಸುಚಿತ್. ವಿದರ್ಭದ ಆರಂಭಿಕರಾದ ಫೈಜ್ ಫಜಲ್ ಮತ್ತು ರಾಮಸ್ವಾಮಿ ಸಂಜಯ್ ಅವರನ್ನು ಮಿಥುನ್ ಕಡಿಮೆ ಮೊತ್ತಕ್ಕೆ ಪೆವಿಲಿಯನ್ಗೆ ಅಟ್ಟಿದರು. ಕಡೆಯ ಹಂತದಲ್ಲಿ ದರ್ಶನ್ ನಲ್ಕಂಡೆ ವಿಕೆಟ್ ಉರುಳಿಸಿದರು. ಮಿಥುನ್ ಸಾಧನೆ 32ಕ್ಕೆ 3.
Related Articles
Advertisement
ಸಂಕ್ಷಿಪ್ತ ಸ್ಕೋರ್: ವಿದರ್ಭ ಮೊದಲ ಇನ್ನಿಂಗ್ಸ್-8 ವಿಕೆಟಿಗೆ 245 (ಜಿ. ಸತೀಶ್ 57, ಜಾಫರ್ 41, ವಾಘ… ಔಟಾಗದೆ 37, ವಾಡ್ಕರ್ 31, ಸುಚಿತ್ 25ಕ್ಕೆ 3, ಮಿಥುನ್ 32ಕ್ಕೆ 3, ವಿನಯ್ 34ಕ್ಕೆ 1).