Advertisement

ಕರ್ನಾಟಕ, ತಮಿಳುನಾಡು ಸೌಹಾರ್ದ

12:31 PM Jan 09, 2018 | Team Udayavani |

ಊಟಿ (ತಮಿಳುನಾಡು): ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಸಾಮರಸ್ಯದ ಸಂಕೇತವಾಗಿ ಇಲ್ಲಿ ಮೈದಳೆದ ‘ಕರ್ನಾಟಕ ಸಿರಿ ತೋಟಗಾರಿಕೆ ಉದ್ಯಾನ’ ಸೋಮವಾರ ಲೋಕಾರ್ಪಣೆಗೊಂಡಿತು. ಫ‌ರ್ನ್ಹಿಲ್‌ನಲ್ಲಿ 38.91ಎಕರೆ ಜಾಗದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಉದ್ಯಾನವನ್ನು ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಲೋಕಾರ್ಪಣೆಗೊಳಿಸಿದರು.

Advertisement

ಎರಡೂ ರಾಜ್ಯಗಳ ನಾಡಗೀತೆಗಳು ತಮಿಳುನಾಡು, ಕರ್ನಾಟಕದ ಸೌಹಾರ್ದಕ್ಕೆ ಕಾರಣವಾಯಿತು. ಈ ವೇಳೆ ಸಚಿವ ಮಲ್ಲಿಕಾರ್ಜುನ್‌ ಮಾತನಾಡಿ, ಅಧಿಕಾರಿಗಳನ್ನು ತೋಟಗಾರಿಕೆ ತಂತ್ರಜ್ಞಾನ ಮತ್ತು  ಕೃಷಿಅಧ್ಯಯನಕ್ಕೆ ಚೀನಾ, ಇಸ್ರೇಲ್, ಇಂಗ್ಲೆಂಡ್‌ ಮತ್ತು ಅಮ್ನೆಸ್ಟಿಗಳಿಗೆ ಕಳುಹಿಸಲಾಗಿತ್ತು. ಅದರ ಪ್ರಯೋಜನ ಪಡೆದು ರಾಜ್ಯದಲ್ಲಿಯೂ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next