Advertisement

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ,ನ.1ರಂದು ಪ್ರದಾನ ಯಾರಿಗೆಲ್ಲಾ ಪ್ರಶಸ್ತಿ

06:27 PM Oct 30, 2017 | Sharanya Alva |

ಬೆಂಗಳೂರು: ಖ್ಯಾತ ಅಂಕಣಕಾರ ರಾಮಚಂದ್ರ ಗುಹಾ, ಪ್ರಸಿದ್ಧ ಗಾಯಕ ಯೇಸುದಾಸ್, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್, ಹಿರಿಯ ಸಾಹಿತಿ ವೈದೇಹಿ, ಖ್ಯಾತ ನಟ ಮುಖ್ಯಮಂತ್ರಿ ಚಂದ್ರ ಸೇರಿದಂತೆ 62 ಮಂದಿಗೆ 2017ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಸೋಮವಾರ ಪ್ರಕಟಿಸಿದೆ.

Advertisement

2017ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನವೆಂಬರ್ 1ರಂದು ಪ್ರದಾನ ಮಾಡಲಾಗುತ್ತಿದೆ. ಭಾಷಾ ತಜ್ಞ ಎಸ್ ಸೈಯದ್ ಅಹ್ಮದ್, ಜಾನಪದ ವಿದ್ವಾಂಸ ರಾಜಶೇಖರ್, ಸಾಹಿತಿ ಡಾ.ಹನುಮಾಕ್ಷಿ ಗೋಗಿ, ನಾಟಕಕಾರ ಬೇಲೂರು ಕೃಷ್ಣಮೂರ್ತಿ, ಯಕ್ಷಗಾನ ಕಲಾವಿದ ಶಿವರಾಮ ಜೋಗಿ, ಬಳ್ಕೂರು ಕೃಷ್ಣಯಾಜಿ, ವಿಠಪ್ಪ ಗೋರಂಟ್ಲಿ, ಸಮಾಜಸೇವಕ ಡಾ.ರವೀಂದ್ರನಾಥ ಡಾ.ರವೀಂದ್ರನಾಥ ಶ್ಯಾನಭಾಗ್ ಸೇರಿದಂತೆ 62 ಮಂದಿ ಗಣ್ಯರಿಗೆ ಪ್ರಶಸ್ತಿ ಘೋಷಿಸಿದೆ.

ನವೆಂಬರ್ 1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಜತೆ ಒಂದು ಲಕ್ಷ ರೂ ಹಾಗೂ 20 ಗ್ರಾಂ ಚಿನ್ನದ ಪದಕ ನೀಡಿ ಸನ್ಮಾನಿಸಲಾಗುತ್ತದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next