Advertisement

Karnataka poll 2023 ಹಿನ್ನಲೆ ಹುಣಸೂರಿನಲ್ಲಿ ಪೊಲೀಸರ ಪಥಸಂಚಲನ

08:39 PM Apr 05, 2023 | Team Udayavani |

ಹುಣಸೂರು : ಚುನಾವಣೆ ಹಿನ್ನಲೆಯಲ್ಲಿ ಅರೆಸೇನಾಪಡೆ ಮತ್ತು ಪೊಲೀಸರು ನಗರದ ವಿವಿಧ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು.

Advertisement

ನಗರದ ಶಬ್ಬೀರ್ ನಗರದಿಂದ ಮಿಲಿಟರಿ ಯೋಧರು ಮತ್ತು ಪೊಲೀಸರು ಎಸ್.ಪಿ. ಸೀಮಾ ಲಾಟ್ಕರ್, ಅಡಿಷನಲ್ ಎಸ್.ಪಿ. ಡಾ.ನಂದಿನಿ, ಡಿವೈಎಸ್‌ಪಿ ಮಹೇಶ್ ಎಂ.ಕೆ.ರವರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಅರೆ ಸೇನಾಪಡೆಯ ಯೋಧರು, ಡಿ.ಎ.ಆರ್. ಮತ್ತು ಕೆಎಸ್‌ಆರ್‌ಪಿ ತುಕಡಿ, ಹಾಗೂ ಸ್ಥಳಿಯ ಪೊಲೀಸರು ಸೇರಿದಂತೆ 300 ಕ್ಕೂ ಹೆಚ್ಚು ಪೊಲೀಸರು ನಗರದ ಟಿಎಪಿಸಿಎಂಎಸ್ ರಸ್ತೆ, ಐ.ಕೆ.ಕಲ್ಯಾಣ ಮಂಟಪದ ರಸ್ತೆ, ಲೀಲಾ ಚಿತ್ರಮಂದಿರ ರಸ್ತೆ, ಜಂಡೇ ಸರ್ಕಲ್, ಬಜಾರ್ ರಸ್ತೆ ಮೂಲಕ ಹೊಸ ಬಸ್ ನಿಲ್ದಾಣದ ಮಾರ್ಗವಾಗಿ ಡಿವೈಎಸ್‌ಪಿ ಕಚೇರಿ ಆವರಣದಲ್ಲಿ ಅಂತ್ಯಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next