Advertisement

ಅಮ್ಮ ಭಗವಾನ್‌ ಪಾದುಕೆ ಮೈಗೆ ಸವರಿಕೊಂಡ ಸಚಿವ ಮಹೇಶ್‌ ವಿವಾದ

12:33 PM Jun 19, 2018 | Team Udayavani |

ಬೆಂಗಳೂರು : ಮಾಯಾವತಿ ಅವರ ಬಿಎಸ್‌ಪಿ ಯಿಂದ ಗೆದ್ದುಬಂದು ರಾಜ್ಯದಲ್ಲಿನ ಸಮ್ಮಿಶ್ರ ಸರಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವ ಎನ್‌ ಮಹೇಶ್‌ ಇದೀಗ ವಿವಾದವೊಂದನ್ನು ಸೃಷ್ಟಿಸಿದ್ದಾರೆ.

Advertisement

ಸಚಿವ ಮಹೇಶ್‌ ಅವರು ಅಮ್ಮ ಭಗವಾನ್‌ ಪಾದುಕೆಯನ್ನು ತನ್ನ ಮೈಗೆ ಸವರಿಕೊಳ್ಳುವುದನ್ನು ಕಾಣಿಸುವ ವಿಡಿಯೋ ಚಿತ್ರಿಕೆಯೊಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. 

ಈ ಕೃತ್ಯದ ಮೂಲಕ ಸಚಿವ ಮಹೇಶ್‌ ಅವರು ಅಂಬೇಡ್ಕರ್‌ ಸಿದ್ಧಾಂತವನ್ನು ಗಾಳಿಗೆ ತೂರಿ ನಮಗೆಲ್ಲ ನಿರಾಶೆ ಉಂಟುಮಾಡಿದ್ದಾರೆ ಎಂದು ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಮಹೇಶ್‌ ಈ ಹಿಂದೆ ಅಂಬೇಡ್ಕರ್‌ ವಿಚಾರಧಾರೆಯನ್ನು ಊರೆಲ್ಲ ಹರಡಿ ಜನಮನ ಗೆದ್ದವರು; ಆದರೆ ಅವರು ಅಮ್ಮ ಭಗವಾನ್‌ ಪಾದುಕೆಯನ್ನು ತಮ್ಮ ಮೈಗೆ ಸವರಿಕೊಳ್ಳುವ ಮೂಲಕ ಘನತೆಯನ್ನು ಕಳೆದುಕೊಂಡಿದ್ದಾರೆ ಎಂದು ಬೆಂಬಲಿಗರು ಕೋಪ ತಾಪ ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next