Advertisement

ಕೇರಳ ಗಡಿ ಸಂಚಾರ ನಿರ್ಬಂಧ : ಸ್ಪಷ್ಟನೆ ನೀಡಲು ನಿರ್ದೇಶ

12:09 AM Mar 31, 2021 | Team Udayavani |

ಬೆಂಗಳೂರು: ಕರ್ನಾಟಕ-ಕೇರಳ ರಾಜ್ಯಗಳ ನಡುವಿನ ಸುಮಾರು 25 ಚೆಕ್‌ಪೋಸ್ಟ್‌ ಮತ್ತು ಗಡಿ ಪಾಯಿಂಟ್‌ಗಳನ್ನು ಮುಚ್ಚುವ ಸಂಬಂಧ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ನೀಡಲಾಗಿದ್ದ ಅಧಿ ಕಾರವನ್ನು ವಾಪಸ್‌ ಪಡೆದು ಕೊಳ್ಳಲಾಗುವುದು ಎಂದು ಕಾಸರಗೋಡಿನ ವಕೀಲ ಬಿ. ಸುಬ್ಬಯ್ಯ ರೈ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ರಾಜ್ಯ ಸರಕಾರ ಮೌಖಕವಾಗಿ ಹೈಕೋರ್ಟ್‌ಗೆ ತಿಳಿಸಿದೆ.

Advertisement

ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಅರ್ಜಿದಾರರ ಮತ್ತು ಸರಕಾರ ಪರ ವಕೀಲರ ಹೇಳಿಕೆ ಬಳಿಕ ಪೀಠವು ಕರ್ನಾಟಕ- ಕೇರಳ ರಾಜ್ಯಗಳ 25 ಚೆಕ್‌ ಪೋಸ್ಟ್‌ ಹಾಗೂ ಗಡಿ ಪಾಯಿಂಟ್‌ಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆಯೇ ಅಥವಾ ನಿರ್ಬಂಧ ಮುಂದುವರಿಯಲಿದೆಯೇ ಎಂಬ ಸ್ಪಷ್ಟನೆ ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಎಪ್ರಿಲ್‌ 1ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next