Advertisement

ಕೋವಿಡ್-19 ತಡೆಯುವಲ್ಲಿ ಕೇರಳಕ್ಕಿಂತ ಕರ್ನಾಟಕ ಮುಂದು: ಸಚಿವ ಸುಧಾಕರ್

10:34 AM Mar 22, 2020 | keerthan |

ಚಿಕ್ಕಬಳ್ಳಾಪುರ: ಕೋವಿಡ್-19 ವೈರಸ್ ತಡೆಯುವಲ್ಲಿ ಕೇರಳಕ್ಕಿಂತ ಕರ್ನಾಟಕ ಮುಂದಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು.

ಕೇರಳ ಸರ್ಕಾರ ಕೋವಿಡ್-19 ವೈರಸ್ ತಡೆಯಲು‌ 20,000 ಸಾವಿರ ಕೋಟಿ ವಿಶೇಷ ಪ್ಯಾಕೇಜ್  ಘೋಷಿಸಿ ಇಡೀ ದೇಶಕ್ಕೆ ಕೇರಳ ಮಾದರಿ ಆಗಿದೆಯೆಂಬುದರ ಬಗ್ಗೆ‌ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

ಕೇರಳಕ್ಕಿಂತ ತಂತ್ರಜ್ಞಾನ ಬಳಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕೇರಳಕ್ಕಿಂತ ಹೆಚ್ಚು ಪ್ರಾಶಸ್ತ್ಯವನ್ನು ಕೋವಿಡ್-19 ತಡೆಗೆ ಕರ್ನಾಟಕ ನೀಡಿದೆ ಎಂದರು. ಆರೋಗ್ಯ ಸಚಿವರ ಹಾಗೂ ವೈದ್ಯಕೀಯ ಶಿಕ್ಷಣ ‌ಸಚಿವರ ನಡುವೆ ಸಮನ್ವಯತೆ ಕೊರತೆ ಇದೆಯೆ ಎಂಬುದರ ಬಗ್ಗೆ‌ ಕೇಳಿದ ಪ್ರಶ್ನೆಗೆ‌ ಇದೆಲ್ಲಾ ರಾಜಕೀಯ ಪ್ರೇರಿತ ಆರೋಪಗಳು ಎಂದು‌ ಸಚಿವ ಡಾ.ಕೆ.ಸುಧಾಕರ್‌ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next