Advertisement

ಕರ್ನಾಟಕ ಗುಡಿಸಲು ಮುಕ್ತವಾಗಿಸಲು ಪಣ

10:54 PM Dec 22, 2019 | Lakshmi GovindaRaj |

ಬೀದರ: ಕರ್ನಾಟಕವನ್ನು ಗುಡಿಸಲು ಮುಕ್ತವಾಗಿಸಲು “ಗುಡಿಸಲು ಮುಕ್ತ ಪಟ್ಟಣ’ದ ಗುರಿ ಹಾಕಿಕೊಳ್ಳಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು. ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕವನ್ನು ಗುಡಿಸಲು ಮುಕ್ತವಾಗಿಸಲು “ಗುಡಿಸಲು ಮುಕ್ತ ಪಟ್ಟಣ’ದ ಗುರಿ ಹಾಕಿಕೊಳ್ಳಲಾಗಿದೆ. ಮನೆ ಕಟ್ಟಿಕೊಂಡ ಫಲಾನುಭವಿ ಗಳಿಗೆ ಹಣ ನೀಡಲು 211 ಕೋಟಿ ರೂ.ಗಳನ್ನು ಶನಿವಾರವಷ್ಟೇ ಬಿಡುಗಡೆ ಮಾಡಲಾಗಿದೆ.

Advertisement

59 ಸಾವಿರ ಫಲಾನುಭವಿಗಳಿಗೆ ಸೋಮವಾರವೇ ಅವರ ಖಾತೆಗೆ ಹಣ ಜಮೆ ಮಾಡಲಾ ಗುತ್ತದೆ. ಇದರಲ್ಲಿ ಅವ್ಯವಹಾರ, ಅನರ್ಹರಿಗೆ ಮನೆ ನೀಡಿದ್ದರೆ ತಡೆ ಹಿಡಿಯಲಾಗುತ್ತದೆ ಎಂದರು. ರಾಜ್ಯದಲ್ಲಿ 1.80 ಲಕ್ಷ ಮನೆ ನಿರ್ಮಿಸುವ ಗುರಿ ಹೊಂದ ಲಾಗಿದೆ. ಮಾರ್ಚ್‌ನೊಳಗೆ 43 ಸಾವಿರ ಮನೆ ನಿರ್ಮಿಸ ಲಾಗುವುದು. ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರದ ಜಮೀನು ಇಲ್ಲದ ಗ್ರಾಮಗಳಲ್ಲಿ ಮನೆ ಕಟ್ಟಿಕೊಡಲು ಜಮೀನು ಖರೀದಿಸಲು ಮುಂದಿನ ಮೂರುವರೆ ವರ್ಷಕ್ಕಾಗಿ 100 ಕೋಟಿ ರೂ.ಮೀಸಲಿಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next