Advertisement
ಸದ್ಯದ ಮುನ್ನಡೆ 69 ರನ್.32ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಹಿಮಾಚಲ ಪ್ರದೇಶ ಇನ್ನಿಂಗ್ಸ್ ಹಿನ್ನಡೆಗೆ ಸಿಲುಕುವ ಭೀತಿಗೆ ಸಿಲುಕಿತ್ತು. ಆದರೆ ಗುರುವಾರ ಬ್ಯಾಟಿಂಗ್ ಮುಂದುವರಿಸಿ, ನಿಧಾನ ಗತಿಯ ಆಟವಾಡಿ ರಾಜ್ಯ ಬೌಲರ್ಗಳನ್ನು ಕಾಡಿತು. ಆರಂಭಿಕ ಬ್ಯಾಟ್ಸ್ ಮನ್ ಪ್ರಿಯಾಂಶು ಖಾಂಡೂರಿ (69) ಹಾಗೂ ನಿಖೀಲ್ ಗಂಗಾr (46) 5ನೇ ವಿಕೆಟಿಗೆ 90 ರನ್ ಜತೆಯಾಟ ನಿರ್ವಹಿಸಿ ತಂಡವನ್ನು ಆತಂಕದಿಂದ ಪಾರು ಮಾಡಿದರು. ಇವರಿಬ್ಬರ ಜತೆಯಾಟವನ್ನು ಜೆ. ಸುಚಿತ್ ಮುರಿದರು. ಅನಂತರ ಕ್ರೀಸ್ ಇಳಿದ ರಿಷಿ ಧವನ್, ಪ್ರಿಯಾಂಶುಗೆ ಉತ್ತಮ ಸಾಥ್ ಕೊಟ್ಟರು. ಇದರಿಂದ ತಂಡ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು. ರಿಷಿ ಧವನ್ (72) ಹಾಗೂ ಆಕಾಶ್ ವಸಿಷ್ಠ (18) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಪ್ರಿಯಾಂಶು-ನಿಖೀಲ್ ಗಂಗಾr 5ನೇ ವಿಕೆಟಿಗೆ ಕ್ರೀಸ್ ಆಕ್ರಮಿಸಿಕೊಂಡು ತಂಡದ ನೆರವಿಗೆ ನಿಂತರು. ಆರಂಭಿಕ ಪ್ರಿಯಾಂಶು 240 ಎಸೆತಗಳನ್ನು ತಡೆದು ನಿಂತರು (8 ಬೌಂಡರಿ). ನಿಖೀಲ್ ಆಟವೂ ಎಚ್ಚರಿಕೆಯಿಂದ ಕೂಡಿತ್ತು. ಅವರ 46 ರನ್ 103 ಎಸೆತಗಳಿಂದ ದಾಖಲಾಯಿತು (5 ಬೌಂಡರಿ, 1 ಸಿಕ್ಸರ್).
Related Articles
Advertisement