Advertisement
ಭಾರತ ಅನ್ನುವುದು ಕೇವಲ ಭೌಗೋಳಿಕ ಅಥವಾ ಭೌತಿಕ ಛಾಯೆ ಅಲ್ಲ. ಇದೊಂದು ಬಲಿಷ್ಠ ನಾಗರಿಕತೆಯ ಪ್ರಬುದಟಛಿ ಪ್ರಜಾಪ್ರಭುತ್ವ ದೇಶ. ಇಲ್ಲಿನ ಕಲೆ, ಸಂಸ್ಕೃತಿ, ಪರಂಪರೆ, ಪ್ರಜಾತಂತ್ರ ವ್ಯವಸ್ಥೆ, ಆರ್ಥಿಕ, ಸಾಮಾಜಿಕ, ರಾಜಕೀಯ ಚೌಕಟ್ಟುಗಳ ಅಸ್ಮಿತೆಯನ್ನು ಪ್ರಜ್ಞಾಪೂರ್ವಕವಾಗಿ ಮುನ್ನಡೆಸಿಕೊಂಡು ಹೋಗಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿ. ಬಡವರು, ಅವಕಾಶ ವಂಚಿತರ ಬಗ್ಗೆ ಕಾಳಜಿ, ಆರ್ಥಿಕ ಅಸಮಾನತೆಯ ನಿವಾರಣೆ ಎಲ್ಲ ಹಂತದ ಚುನಾಯಿತ ಜನಪ್ರತಿನಿಧಿಗಳ ಆದ್ಯತೆ ಆಗಬೇಕು ಎಂದರು.
Related Articles
Advertisement
ಕಳೆದ ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ನಾನು ಕರ್ನಾಟಕದಿಂದ ಸ್ಪರ್ಧಿಸುವ ವಿಚಾರದಲ್ಲಿ ಕೆಲವೊಂದು ಆಕ್ಷೇಪಣೆಗಳು ಕೇಳಿ ಬಂದಾಗ ಎಂ.ವಿ.ರಾಜಶೇಖರನ್ ಅವರು ನನಗೆ ವೈಯಕ್ತಿಕವಾಗಿ ಸುದೀರ್ಘ ಪತ್ರವೊಂದು ಬರೆದು, ಕರ್ನಾಟಕದಿಂದಲೇ ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ಬಳಿಕ ರಾಜಸ್ಥಾನದಿಂದ ನನ್ನ ಸ್ಪರ್ಧೆ ಖಚಿತ ಆದಾಗ, ಕರ್ನಾಟಕ ನಿಮ್ಮ ಸೇವೆಯಿಂದ ವಂಚಿತವಾಯಿತು ಎಂದು ತುಂಬಾ ಭಾವನಾತ್ಮಕ ಪತ್ರ ಬರೆದಿದ್ದರು ಎಂದು ವೆಂಕಯ್ಯ ನಾಯ್ಡು ಇದೇ ವೇಳೆ ನೆನಪಿಸಿಕೊಂಡರು.ಕೇಂದ್ರ ಸಚಿವರಾದ ಅನಂತಕುಮಾರ್,ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ,ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಆರ್.ಅಶೋಕ್, ಸಿ.ಎಂ.ಉದಾಸಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಟಿ.ರವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಚ್.ಪಿ. ಖೀಂಚಾ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ಜನತೆಗೆ ಧನ್ಯವಾದ ಹೇಳಿದ ನಾಯ್ಡು“ಗೆಳೆಯರೇ, ಸ್ನೇಹಿತರೆ, ಬೆಂಗಳೂರು ನಾಗರಿಕರೆ ಮೂರು ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಕಳಿಸಿದ ಜನತೆಗೆ ಧನ್ಯವಾದಗಳು’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ವೆಂಕಯ್ಯನಾಯ್ಡು, ಸಾಮಾನ್ಯ ರೈತ ಕುಟುಂಬದಿಂದ ಬಂದ ನನ್ನನ್ನು ರಾಷ್ಟ್ರರಾಜಕಾರಣಕ್ಕೆ ವೇದಿಕೆ ಕಲ್ಪಿಸಿದ್ದು ಕರ್ನಾಟಕ ಎಂದು ವೆಂಕಯ್ಯ ನಾಯ್ಡು ತಮ್ಮ ಕರ್ನಾಟಕದ ರಾಜಕೀಯ ನಂಟನ್ನು ಸ್ಮರಿಸಿಕೊಂಡರು. ಉಪ ರಾಷ್ಟ್ರಪತಿಯಾಗಿ ಚುನಾಯಿತ ಆದ ಮೇಲೆ ಮೊದಲು ನನ್ನ ರಾಜಕೀಯ ಕರ್ಮಭೂಮಿ ಕರ್ನಾಟಕಕ್ಕೆ ಹೋಗಬೇಕು ಎಂದು ತೀರ್ಮಾನಿಸಿದೆ. ಹಾಗಾಗಿ ಇಲ್ಲಿ ಬಂದು ಸನ್ಮಾನ ಸ್ವೀಕರಿಸಿ ಜನತೆಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ನಾನು ರಾಜಕೀಯ ಕುಟುಂಬದಿಂದ ಬಂದವನಲ್ಲ. ಒಬ್ಬ ಸಾಮಾನ್ಯ ರೈತನ ಕುಟುಂಬದಿಂದ ಬಂದ ಮಣ್ಣಿನ ಮಗ. ವಾಜಪೇಯಿ, ಅಡ್ವಾಣಿ ಅವರ ಭಾಷಣ ಇದೆ ಎಂದು ರಿಕ್ಷಾದಲ್ಲಿ ಪ್ರಚಾರ ಮಾಡುತ್ತಿದ್ದೆ, ಗೋಡೆಗಳಿಗೆ ಪೋಸ್ಟರ್ ಅಂಟಿಸುತ್ತಿದ್ದ ಮತ್ತು ಲೈಟಿನ ಕಂಬಗಳಿಗೆ ಪಕ್ಷದ ಬಾವುಟಗಳನ್ನು ಕಟ್ಟುತ್ತಿದ್ದ ನಾನು ಇಂದು ಉಪರಾಷ್ಟ್ರಪತಿ ಹುದ್ದೆಗೆ ಏರಿದ್ದೇನೆಂದರೆ ಅದರಲ್ಲಿ ಕರ್ನಾಟಕದ ಪಾಲು ಬಹಳ ದೊಡ್ಡದಿದೆ. ದಶಕಗಳ ಹಿಂದೆ ಕರ್ನಾಟಕದ ಬಿ.ಡಿ.ಜತ್ತಿ ಉಪರಾಷ್ಟ್ರಪತಿ ಆಗಿದ್ದರು, ಇಂದು ನಾನು ಆ ಹುದ್ದೆ ಅಲಂಕರಿಸುತ್ತಿದ್ದೇನೆ ಎಂದು ವೆಂಕಯ್ಯ ನಾಯ್ಡು ಸ್ಮರಿಸಿಕೊಂಡರು. ಸಾಮಾಜಿಕ ಹರಿಕಾರ ಬಸವಣ್ಣನ ವಚನಗಳ ಸಾರವನ್ನು ಎಂ.ವೆಂಕಯ್ಯ ನಾಯ್ಡು ಮೈಗೂಡಿಸಿಕೊಂಡಿದ್ದಾರೆ. ನನಗೆ ಅವರ ಮೇಲೆ ಅಪಾರ ಗೌರವವಿದೆ. ಉಪರಾಷ್ಟ್ರಪತಿ ಆಗಿ ಚುನಾಯಿತ ಆಗಿರುವುದಕ್ಕೆ ನನಗೆ ತುಂಬಾ ಸಂತೋಷ ತಂದಿದೆ. ನುಡಿ ಮತ್ತು ನಡೆಯಲ್ಲಿ ಒಂದೇ ಆಗಿರುವ ಅವರು ಉಪರಾಷ್ಟ್ರಪತಿ ಹುದ್ದೆಯ ಪಾವಿತ್ರ್ಯತೆ ಮತ್ತು ಘನತೆ ಕಾಪಾಡಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.
– ಎಂ.ವಿ. ರಾಜಶೇಖರನ್,
ಕಾಂಗ್ರೆಸ್ ಹಿರಿಯ ನಾಯಕ