Advertisement

ಕರ್ನಾಟಕಕ್ಕೆ ಛತ್ತೀಸ್‌ಗಢ ಎದುರಾಳಿ

11:28 PM Oct 21, 2019 | Team Udayavani |

ಬೆಂಗಳೂರು: ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಕೂಟ ಉಪಾಂತ್ಯ ತಲುಪಿದೆ. ಆತಿಥೇಯ ಕರ್ನಾಟಕ ಬುಧವಾರ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಛತ್ತೀಸ್‌ಗಢವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್‌ ಗುಜರಾತ್‌-ತಮಿಳುನಾಡು ನಡುವೆ ಸಾಗಲಿದೆ. ಸೋಮವಾರ ನಡೆಯಬೇಕಿದ್ದ ತಮಿಳು ನಾಡು- ಪಂಜಾಬ್‌ ಹಾಗೂ ಛತ್ತೀಸ್‌ಗಢ-ಮುಂಬಯಿ ನಡುವಿನ ಎರಡೂ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಮಳೆಯಿಂದ ರದ್ದುಗೊಂಡವು.

Advertisement

ಸೆಮಿಫೈನಲ್‌ ಆಯ್ಕೆ ಹೇಗೆ?
ಕ್ವಾರ್ಟರ್‌ ಫೈನಲ್‌ 3ರಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ತಮಿಳುನಾಡು 39 ಓವರ್‌ಗಳಲ್ಲಿ 6 ವಿಕೆಟ್‌ಗೆ 174 ರನ್‌ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಪಂಜಾಬ್‌ 12.2 ಓವರ್‌ಗಳಲ್ಲಿ 52ಕ್ಕೆ 2 ವಿಕೆಟ್‌ ಕಳೆದುಕೊಂಡಾಗ ಮಳೆ ಸುರಿಯಲಾರಂಭಿಸಿತು. ಪಂದ್ಯ ರದ್ದುಗೊಂಡಿತು. ಲೀಗ್‌ ಹಂತದಲ್ಲಿ ಪಂಜಾಬ್‌ಗಿಂತ ಹೆಚ್ಚು ಜಯ ಸಾಧಿಸಿದ ತಮಿಳುನಾಡು (9) ಸೆಮಿಫೈನಲ್‌ ಪ್ರವೇಶಿಸಿತು. ಪಂಜಾಬ್‌ ಕೇವಲ 5 ಜಯ ಸಾಧಿಸಿತ್ತು.

ಕ್ವಾರ್ಟರ್‌ ಫೈನಲ್‌ 4ರಲ್ಲೂ ಮಳೆಯೇ ಆಟವಾಡಿತು. ಹೀಗಾಗಿ ಮುಂಬಯಿ-ಛತ್ತೀಸ್‌ಗಢ ಪಂದ್ಯ ಕೂಡ ರದ್ದುಗೊಂಡಿತು. ಲೀಗ್‌ನಲ್ಲಿ ಮುಂಬಯಿಗಿಂತ (4 ಜಯ) ಹೆಚ್ಚು ಜಯ ಸಾಧಿಸಿದ್ದ ಛತ್ತೀಸ್‌ಗಢ (5 ಜಯ) ಸೆಮಿಫೈನಲ್‌ ಪ್ರವೇಶಿಸಿತು.

ಛತ್ತೀಸ್‌ಗಢ ಮೊದಲು ಬ್ಯಾಟಿಂಗ್‌ ನಡೆಸಿ 45.4 ಓವರ್‌ಗಳಲ್ಲಿ 6 ವಿಕೆಟ್‌ಗೆ 190 ರನ್‌ ಗಳಿಸಿದರೆ, ಮುಂಬಯಿ 11.3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 90 ರನ್‌ ಮಾಡಿತ್ತು. ಇಲ್ಲಿ ಗೆಲುವಿನ ಅವಕಾಶ ಮುಂಬಯಿ ಪಾಲಿಗೆ ಹೆಚ್ಚಿತ್ತಾದರೂ ಮಳೆ ಇದಕ್ಕೆ ಅವಕಾಶ ಕೊಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next