Advertisement

Karnataka Government: 21 ಐಎಎಸ್‌ ಅಧಿಕಾರಿಗಳ ವರ್ಗ

01:18 AM Jul 06, 2024 | Team Udayavani |

ಬೆಂಗಳೂರು: ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು, ಹೆಚ್ಚುವರಿ ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಹುದ್ದೆಗಳಿಗೆ 21 ಮಂದಿ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Advertisement

ಬಿ. ಶರತ್‌- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ, ಡಾ| ಆರ್‌. ಸೆಲ್ವಮಣಿ- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತರು ಚುನಾವಣೆ (ಪ್ರಭಾರ), ಬೆಂಗಳೂರು. ಡಾ. ರಾಮ್‌ಪ್ರಸಾತ್‌ ಮನೋಹರ್‌- ಹೆಚ್ಚುವರಿ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಅಧ್ಯಕ್ಷರು, ಬೆಂಗಳೂರು ಜಲಮಂಡಳಿ (ಪ್ರಭಾರ), ನಿತೀಶ್‌ ಪಾಟೀಲ್‌- ನಿರ್ದೇಶಕರು, ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ, ಡಾ| ಅರುಂಧತಿ ಚಂದ್ರಶೇಖರ್‌- ಆಯುಕ್ತರು, ಪಂಚಾಯತ್‌ ರಾಜ್‌, ಕೆ. ಜ್ಯೋತಿ- ಆಯುಕ್ತರು, ಜವಳಿ ಅಭಿವೃದ್ಧಿ ಮತ್ತು ನಿರ್ದೇಶಕರು- ಕೈಮಗ್ಗ ಮತ್ತು ಜವಳಿ.

ಸಿ.ಎನ್‌. ಶ್ರೀಧರ- ನಿರ್ದೇಶಕ, ಸೋಷಿಯಲ್‌ ಆಡಿಟ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಡಾ| ಕೆ.ವಿ. ರಾಜೇಂದ್ರ- ನಿರ್ದೇಶಕರು, ಪ್ರವಾಸೋದ್ಯಮ, ಚಂದ್ರಶೇಖರ ನಾಯಕ್‌- ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ (ಜಾರಿ), ಬೆಂಗಳೂರು. ವಿಜಯ ಮಹಾಂತೇಶ್‌ ಬಿ. ದಾನಮ್ಮನವರ್‌- ಜಿಲ್ಲಾಧಿಕಾರಿ, ಹಾವೇರಿ. ಗೋವಿಂದ ರೆಡ್ಡಿ- ಜಿಲ್ಲಾಧಿಕಾರಿ, ಹಾವೇರಿ, ರಘುನಂದನಮೂರ್ತಿ- ಖಜಾನೆ ಆಯುಕ್ತರು, ಬೆಂಗಳೂರು.ಡಾ| ಗಂಗಾಧರಸ್ವಾಮಿ- ಜಿಲ್ಲಾಧಿಕಾರಿ, ದಾವಣಗೆರೆ, ಲಕ್ಷ್ಮಿಕಾಂತ ರೆಡ್ಡಿ- ಜಿಲ್ಲಾಧಿಕಾರಿ, ಮೈಸೂರು, ಕೆ. ನಿತೀಶ್‌- ಜಿಲ್ಲಾಧಿಕಾರಿ, ರಾಯಚೂರು. ಮೊಹ್ಮದ್‌ ರೋಷನ್‌- ಜಿಲ್ಲಾಧಿಕಾರಿ, ಬೆಳಗಾವಿ.

ಶಿಲ್ಪಾ ಶರ್ಮಾ- ಜಿಲ್ಲಾಧಿಕಾರಿ, ಬೀದರ್‌, ಡಾ.ದಿಲೀಶ್‌ ಸಸಿ- ಸಿಇಒ, ಇ-ಆಡಳಿತ, ಬೆಂಗಳೂರು. ಲೋಖಂಡೆ ಸ್ನೇಹಲ್‌ ಸುಧಾಕರ್‌- ವ್ಯವಸ್ಥಾಪಕ ನಿರ್ದೇಶಕ, ಕವಿಕಾ, ಬೆಂಗಳೂರು. ಶ್ರೀರೂಪಾ- ನಿರ್ದೇಶಕರು, ರಾಜ್ಯ ರೇಷ್ಮೆ ಸಂಶೋಧನ ಸಂಸ್ಥೆ, ಬೆಂಗಳೂರು. ಗಿಟ್ಟೆ ಮಾಧವ್‌ ವಿಠಲ್‌ ರಾವ್‌- ಪ್ರಧಾನ ವ್ಯವಸ್ಥಾಪಕ, ಪುನರ್ವಸತಿ ಮತ್ತು ಪರಿಹಾರ, ಬಾಗಲಕೋಟೆ, ಎನ್‌. ಹೇಮಂತ್‌- ಸಿಇಒ, ಜಿ.ಪಂ., ಶಿವಮೊಗ್ಗ ಮತ್ತು ನೊಂಜೈ ಮಹ್ಮದ ಅಲಿ ಅಕ್ರಂ ಶಾ- ಸಿಇಒ, ಜಿ.ಪಂ. ವಿಜಯನಗರ, ಗಂಗೂಬಾಯಿ ರಮೇಶ್‌ ಮಾನಕರ್‌- ಪ್ರಧಾನ ಸಂಪಾದಕಿ, ಕರ್ನಾಟಕ ಗೆಜೆಟಿಯರ್‌, ಬೆಂಗಳೂರು, ಕೆ. ಲಕ್ಷ್ಮೀಪ್ರಿಯ- ಜಿಲ್ಲಾಧಿಕಾರಿ, ಉತ್ತರ ಕನ್ನಡ, ಕಾರವಾರಕ್ಕೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next