Advertisement

‘ರಾಜ್ಯದಲ್ಲಿ ಉಂಟಾದ ನೆರೆ ಹಾವಳಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು’: ಖರ್ಗೆ ಒತ್ತಾಯ

09:45 AM Aug 16, 2019 | keerthan |

ಕಲಬುರಗಿ: ನೆರೆ ಹಾವಳಿಯಿಂದ ಜನ ತತ್ತರಿಸಿ ಹೋಗಿದ್ದು ಈವರೆಗೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಈವರೆಗೂ ಪ್ರಧಾನಿ ಮೋದಿ ಮಹಾರಾಷ್ಟ್ರ, ಕರ್ನಾಟಕ, ಕೇರಳಕ್ಕೂ ಭೇಟಿ ನೀಡಿಲ್ಲ ಕೇಂದ್ರ ಗೃಹ ಸಚಿವ ಅಮಿತ್ ಷಾ ಬಂದು ಹೋಗಿದ್ದಾರೆ ಹೊರತು ಇನ್ನೂ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಉಂಟಾದ ನೆರೆ ಹಾವಳಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯ ಮಾಡಿದ್ದಾರೆ.

Advertisement

ಮಂತ್ರಿ ಮಂಡಲ ರಚನೆ ಮಾಡಲು ಇಷ್ಟೊಂದು ದಿನ ಬೇಕಂದ್ರೆ ಜನಕ್ಕೆ ಹೇಗೆ ಸಹಾಯ ಮಾಡ್ತೀರಿ? ಮುಖ್ಯಮಂತ್ರಿಗಳು ಒಬ್ಬರೇ ಅಡ್ಡಾಡುವ ಪರಿಸ್ಥಿತಿ ಬಂದಿದ್ದು, ಇಂತಹ ಅವ್ಯವಸ್ಥೆ ಸರ್ಕಾರದಲ್ಲಿ ನಡೆದಿದೆ. ಪುನರ್ವಸತಿ, ಬೆಳೆ ಹಾನಿಯಾದವರಿಗೆ ಪರಿಹಾರ ನೀಡುವ ಕೆಲಸ ತಕ್ಷಣ ಆಗಬೇಕು. ಅಧಿಕಾರಿಗಳು ಚುರುಕುಗೊಂಡು ಕೆಲಸ ಮಾಡಬೇಕು, ಅವರಿಗೆ ಮುಕ್ತವಾದ ಸ್ವಾತಂತ್ರ್ಯ ನೀಡಬೇಕು. ಯಾವ್ಯಾವ ಕೆಲಸಕ್ಕೆ ಹಣ ಬೇಕು ಅದಕ್ಕೆ ಹಣ ನೀಡಲು ಮುಕ್ತ ಸ್ವಾತಂತ್ರ್ಯ ನೀಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next