Advertisement

Karnataka Election ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ ತೆರೆದೆ: ರಾಹುಲ್

08:43 PM Apr 23, 2023 | Team Udayavani |

ವಿಜಯಪುರ : ನಾನು ಸತ್ಯ ಹೇಳಿದ್ದೇನೆ ಹೊರತು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಲಿಲ್ಲ. ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ ತೆರೆದಿರುವೆ (ನಫ್ರತ್ ಕೀ ಬಾಜಾರ್ ಮೇ ಮೊಹಬ್ಬತ್ ಕೀ ದುಖಾನ್ ಖುಲಾ ಹೂಂ) ಆದರೂ ನನ್ನ ಲೋಕಸಭೆ ಸದಸ್ಯತ್ವ ಕಿತ್ತುಕೊಂಡರು, ಮನೆ ಕಸಿದುಕೊಂಡರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ವಿಜಯಪುರ ನಗರದಲ್ಲಿ ಭಾನುವಾರ ಚುನಾವಣಾ ರೋಡ್ ಶೋ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು, ಅವರು ನನ್ನಿಂದ ಸದಸ್ಯತ್ವ-ಮನೆ ಕಿತ್ತುಕೊಂಡುದು ನನಗೆ ಅನ್ಯಾಯ ಆಗಲಿಲ್ಲ. ಬದಲಾಗಿ ಒಳಿತೇ ಆಯಿತು. ದೇಶದ ಸಾವಿರಾರು ಜನರು ನನಗೆ ಪತ್ರ ಬರೆದು ನನ್ನ ಮನೆಗೆ ಬನ್ನಿ ಎಂದು ಪ್ರೀತಿಯ ಆಹ್ವಾನ ನೀಡಿದರು. ಇದು ಜನತೆಯ ಹೃದಯದಲ್ಲಿ ನಾನು ಶಾಶ್ವತ ಮನೆ ಮಾಡಲು ಇನ್ನೂ ಸಹಕಾರಿ ಆಯ್ತು ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next