Advertisement

ಕೋವಿಡ್ ಕಳವಳ- ಆಗಸ್ಟ್ 25 : 8161 ಹೊಸ ಪ್ರಕರಣ ; 6814 ಡಿಸ್ಚಾರ್ಜ್ ; 148 ಸಾವು

07:27 PM Aug 25, 2020 | sudhir |

ಬೆಂಗಳೂರು: ಸೋಮವಾರ ಸಾಯಂಕಾಲದಿಂದ ಮಂಗಳವಾರ ಸಾಯಂಕಾಲದವರೆಗಿನ ಕೋವಿಡ್ 19 ಸೋಂಕು ಪ್ರಕರಣಗಳ ವರದಿಯ ಪ್ರಕಾರ, ಈ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 8161 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ.

Advertisement

ಈ ನಿರ್ಧಿಷ್ಟ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 6814 ಸೋಂಕಿತರು ಗುಣಮುಖರಾಗಿದ್ದಾರೆ. ಮತ್ತು ಈ ಅವಧಿಯಲ್ಲಿ 148 ಸೋಂಕಿತರು ಮೃತಪಟ್ಟಿದ್ದಾರೆ.

ಇದೀಗ ರಾಜ್ಯದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ ಎರಡೂವರೆ ಲಕ್ಷಕ್ಕೇರಿದೆ. ನಮ್ಮಲ್ಲಿ ಸದ್ಯಕ್ಕೆ ಒಟ್ಟು 2,91,826 ಸೋಂಕು ಪ್ರಕರಣಗಳು ದಾಖಲಾಗಿವೆ. ಈ ನಡುವೆ ಸೋಂಕಿತರ ಚೇತರಿಕೆ ಸಂಖ್ಯೆಯೂ 02 ಲಕ್ಷದ ಗಡಿ ದಾಟಿದ್ದು ಆಶಾದಾಯಕ ವಿಷಯವಾಗಿದೆ. 2,04,439 ಸೊಂಕಿತರು ಇದೀಗ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಇದೀಗ ಒಟ್ಟು 82,410 ಸಕ್ರಿಯ ಕೋವಿಡ್ 19 ಸೋಂಕು ಪ್ರಕರಣಗಳಿವೆ.

ಹಾಗೂ ರಾಜ್ಯದಲ್ಲಿ ಕೋವಿಡ್ 19 ಸೊಂಕು ಸಂಬಂಧಿ 4958 ಸಾವಿನ ಪ್ರಕರಣಗಳು ದಾಖಲಾಗಿವೆ ಹಾಗೂ 19 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 751 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬಾಗಲಕೋಟೆ (83), ಬಳ್ಳಾರಿ (551), ಬೆಳಗಾವಿ (298), ಬೆಂಗಳೂರು ಗ್ರಾಮಾಂತರ (63), ಬೆಂಗಳೂರು ನಗರ (2294), ಬೀದರ್ (61), ಚಾಮರಾಜ ನಗರ (17 ), ಚಿಕ್ಕಬಳ್ಳಾಪುರ (93 ), ಚಿಕ್ಕಮಗಳೂರು (88 ), ಚಿತ್ರದುರ್ಗ ( 114), ದಕ್ಷಿಣ ಕನ್ನಡ (247), ದಾವಣಗೆರೆ (318), ಧಾರವಾಡ (204), ಗದಗ (175) , ಹಾಸನ (205 6 ) , ಹಾವೇರಿ (78 ), ಕಲಬುರುಗಿ (227 ), ಕೊಡಗು (8 ), ಕೋಲಾರ ( 47), ಕೊಪ್ಪಳ (238), ಮಂಡ್ಯ (153 ), ಮೈಸೂರು (1331) , ರಾಯಚೂರು (88), ರಾಮನಗರ (56), ಶಿವಮೊಗ್ಗ (276 ), ತುಮಕೂರು (223 ), ಉಡುಪಿ (2171), ಉತ್ತರ ಕನ್ನಡ (141 ), ವಿಜಯಪುರ (135 ), ಯಾದಗಿರಿ (132 ) ಸೇರಿದಂತೆ ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ ಇಂದು ಮೂರಂಕಿ ಹಾಗೂ ಎರಡಂಕಿಯ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next