Advertisement

ಬಹುಪರಾಕ್! ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡ ಸಿಎಂ ಸಿದ್ದರಾಮಯ್ಯ

05:35 PM Mar 10, 2018 | Sharanya Alva |

ಮೈಸೂರು:ದೇವರಾಜು ಅರಸು ನಂತರ ಮೈಸೂರು ಭಾಗದ 2ನೇ ಸಿಎಂ ನಾನೇ. ಮೈಸೂರು ರಾಜರ ನಂತರ ಹೆಚ್ಚು ಕೊಡುಗೆ ನೀಡಿದ ಸರ್ಕಾರ ನಮ್ಮದು. 5 ವರ್ಷದಲ್ಲಿ ಮೈಸೂರು ಜಿಲ್ಲಾಭಿವೃದ್ಧಿಗಾಗಿ 5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ..ಇದೆಲ್ಲಾ ಸಾಧ್ಯವಾದದ್ದು ನಿಮ್ಮ ಪ್ರೀತಿ, ಸಹಕಾರದಿಂದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಶನಿವಾರ ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಸ್ವತಂತ್ರ ಭಾರತದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಕೊಟ್ಟ ಸರ್ಕಾರ ಬೇರೆ ಯಾವುದೂ ಇಲ್ಲ. ಮೈಸೂರಿನ ಪರಂಪರೆ ಉಳಿಸಿಕೊಂಡು ಕಟ್ಟಡ ಕಟ್ಟಿದ್ದೇವೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.

ಯಾವುದಾದರೂ ಕೆಲಸ ಮಾಡಿದ್ದ ಸರ್ಕಾರವಿದ್ದರೆ ಅದು ನಮ್ಮ ಸರ್ಕಾರ ಮಾತ್ರ. ಲಲಿತ ಮಹಲ್ ಪ್ಯಾಲೇಸ್ ಮಾದರಿಯಲ್ಲಿ ಡಿಸಿ ಕಚೇರಿ ಕಟ್ಟಿಸಿದ್ದೇವೆ. ಇದೆಲ್ಲವೂ ಸಾಧ್ಯವಾಗಿದ್ದು ನಾನು ಸಿಎಂ ಆದ ಮೇಲೆಯೇ ಎಂದು ಹೊಗಳಿದರು.

Advertisement

Udayavani is now on Telegram. Click here to join our channel and stay updated with the latest news.

Next