Advertisement

ಕರ್ಣಾಟಕ ಬ್ಯಾಂಕ್‌: 2 ಐಬಿಎ ಪ್ರಶಸ್ತಿ

12:07 PM Feb 23, 2017 | Harsha Rao |

ಮಂಗಳೂರು: ಕರ್ಣಾಟಕ ಬ್ಯಾಂಕಿಗೆ ಐಬಿಎ- ಬ್ಯಾಂಕಿಂಗ್‌ ಟೆಕ್ನಾಲಜಿಯ ಎರಡು ಪ್ರತಿಷ್ಠಿತ ಪ್ರಶಸ್ತಿಗಳಾದ 1). ಶ್ರೇಷ್ಠ ವಿತ್ತೀಯ ಸೇರ್ಪಡೆ ಸಾಧನೆಯ (ಸಣ್ಣ ಬ್ಯಾಂಕ್‌ ವಿಭಾಗ) ವಿಜೇತ (ವಿನ್ನರ್‌); 2). ಡಿಜಿಟಲ್‌ ಹಾಗೂ ಚಾನೆಲ್ಸ್‌ ಟೆಕ್ನಾಲಜಿ ಬಳಕೆಯ (ಸಣ್ಣ ಬ್ಯಾಂಕ್‌ ವಿಭಾಗ) ದ್ವಿತೀಯ (ರನ್ನರ್‌ ಅಪ್‌) ಸ್ಥಾನ ಲಭಿಸಿದೆ. ಕಳೆದ ವರ್ಷದ ಗಣನೀಯ ತಾಂತ್ರಿಕತೆ ಮತ್ತು ವ್ಯವಹಾರ ಲಾಭ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

Advertisement

ಬ್ಯಾಂಕಿನ ಚೀಫ್‌ ಜನರಲ್‌ ಮ್ಯಾನೇಜರ್‌ ಮಹಾಬಲೇಶ್ವರ ಎಂ. ಎಸ್‌., ಜನರಲ್‌ ಮ್ಯಾನೇಜರ್‌ ರಾಘವೇಂದ್ರ ಭಟ್‌ ಎಂ. ಅವರು ರಿಸರ್ವ್‌ ಬ್ಯಾಂಕ್‌ನ ಉಪ ಗವರ್ನರ್‌ ಡಾ| ವಿರಾಲ್‌ ವಿ. ಆಚಾರ್ಯ, ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ| ರಘುನಾಥ್‌ ಮಾಶೇಲ್ಕರ್‌ರಿಂದ ಮುಂಬಯಿಯಲ್ಲಿ ಫೆ. 21ರಂದು ಪ್ರಶಸ್ತಿ ಸ್ವೀಕರಿಸಿದರು. ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಚಂದಾ ಕೊಚ್ಚಾರ್‌ ಉಪಸ್ಥಿತರಿದ್ದರು.

“ಭಾರತ ಸರಕಾರದ ವಿತ್ತೀಯ ಸೇರ್ಪಡೆ ಯೋಜನೆ ಮತ್ತು ಡಿಜಿಟಲ್‌ ತಾಂತ್ರಿಕತೆಯಲ್ಲಿ ಕರ್ಣಾಟಕ ಬ್ಯಾಂಕಿನ ಯಶಸ್ವೀ ಸಾಧನೆಗಳಿಗೆ ಈ ಪುರಸ್ಕಾರ ದೊರೆತಿರುವುದು ಸಂತಸ ತಂದಿದೆ’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್‌ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next