Advertisement

Karkala: ಯುವಕ ನಾಪತ್ತೆ; ಪತ್ತೆಗೆ ಪೊಲೀಸ್‌ ಸೂಚನೆ

10:55 PM Sep 20, 2023 | Team Udayavani |

ಕಾರ್ಕಳ: ಕಸಬಾ ಗ್ರಾಮದ ಪೆರ್ವಾಜೆ ಪತ್ತೂಂಜಿಕಟ್ಟೆ ನಿವಾಸಿ ಪ್ರಸಾದ (25) ಕಾಣೆಯಾದ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಯುವಕನ ತಾಯಿ ಶೋಭಾ ಅವರು ಠಾಣೆಗೆ ದೂರು ನೀಡಿದ್ದು, ಮಗ 4 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದ. ಸೆ. 16ರಂದು ಮನೆಯಲ್ಲಿ ಆತ ಮಲಗಿದ್ದ. ಬೆಳಗ್ಗೆ ನೋಡಿದಾಗ ಮನೆಯ ಬಾಗಿಲು ತೆರೆದಿದ್ದು, ಮಲಗಿಕೊಂಡಿದ್ದ ಮಗ ಪ್ರಸಾದ ಮನೆಯಲ್ಲಿ ಇಲ್ಲದೇ ಇದ್ದು ಸಂಬಂಧಿಕರ ಮನೆಯಲ್ಲಿ ಹಾಗೂ ನೆರೆಹೊರೆಯಲ್ಲಿ ಹುಡುಕಾಡಿದರೂ ಪತ್ತೆಯಾಗದೆ ಇರುವುದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಯುವಕನ ಚಹರೆ: ಎತ್ತರ ಸುಮಾರು 5 ಅಡಿ 7 ಇಂಚು, ಗೋಧಿ ಮೈಬಣ್ಣ, ಆಕಾಶ ನೀಲಿ ಬಣ್ಣದ ಶರ್ಟ್‌, ಕಪ್ಪು ಬಣ್ಣದ ಜೀನ್ಸ್‌ ಪ್ಯಾಂಟ್‌ ಧರಿಸಿದ್ದ. ಕನ್ನಡ, ತುಳು ಭಾಷೆ ಮಾತನಾಡುತ್ತಾನೆ. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ನಗರ ಪೊಲೀಸ್‌ ಠಾಣೆ ಅಥವಾ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್‌ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next