Advertisement

ಕಾರ್ಕಳ : ಊರಿಗೆ ತೆರಳಿದ 461 ಮಂದಿ ವಲಸಿ ಕಾರ್ಮಿಕರು

07:25 PM May 03, 2020 | Sriram |

ಕಾರ್ಕಳ: ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ವಿವಿಧೆಡೆಯಿದ್ದ ಸುಮಾರು 461 ಮಂದಿ ವಲಸಿ ಕಾರ್ಮಿಕರು ರವಿವಾರ ಸಂಜೆ 6ರ ವೇಳೆಗೆ ಕೆಎಸ್‌ಆರ್‌ಟಿಸಿ ಬಸ್‌ ಮೂಲಕ ತಮ್ಮ ತಮ್ಮ ಊರಿನತ್ತ ತೆರಳಿದರು. ಕಟ್ಟಡ, ಕೂಲಿ, ಹೊಟೇಲ್‌ ಕಾರ್ಮಿಕರಾಗಿ ದುಡಿಯುತ್ತಿದ್ದ ಗದಗ, ಗಂಗಾವತಿ, ಹಾವೇರಿ, ಬಾಗಲಕೋಟೆ, ಕೊಪ್ಪಳ, ಹುಬ್ಬಳ್ಳಿ, ಯಾದಗಿರಿ, ಗುಲ್ಪರ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಶಿವಮೊಗ್ಗ, ಚಿತ್ರದುರ್ಗ, ಬಿಜಾಪುರ ಭಾಗದ ಸುಮಾರು 461ಮಂದಿ 11 ಬಸ್‌ನಲ್ಲಿ ಊರಿನತ್ತ ಸಾಗಿದರು.

Advertisement

ಕಳೆಕಟ್ಟಿದ ಸಂಭ್ರಮ
ರವಿವಾರ ಸಂಜೆ 3 ಗಂಟೆಗೆ ಕಾರ್ಕಳ ಬಂಡಿಮಠ ಬಸ್‌ ನಿಲ್ದಾಣದಿಂದ ವಿವಿಧ ಜಿಲ್ಲೆಗಳಿಗೆ ಬಸ್‌ ಸೌಲಭ್ಯವಿದೆ ಎಂದು ತಿಳಿದ ಉಭಯ ತಾಲೂಕಿನಲ್ಲಿದ್ದ ಹೊರ ಜಿಲ್ಲೆಯ ಕೂಲಿ ಕಾರ್ಮಿಕರು ಮಧ್ಯಾಹ್ನವೇ ನಗರದತ್ತ ಧಾವಿಸಿದರು. ಆಟೋ, ಟ್ಯಾಕ್ಸಿ ಸೇವೆ ಇಲ್ಲದ ಪರಿಣಾಮ ದೂರದೂರಿನಿಂದಲೂ ನಡೆದುಕೊಂಡೇ ಬಂಡಿಮಠ ಬಸ್‌ ನಿಲ್ದಾಣದತ್ತ ಸಾಗಿದ ಹೊರ ಜಿಲ್ಲೆಯ ವಲಸಿ ಕಾರ್ಮಿಕರ ಮುಖದಲ್ಲಿ ಸಂಭ್ರಮ ಕಳೆಕಟ್ಟಿತ್ತು. ಅದೆಷ್ಟೋ ದಿನಗಳಿಂದ ಈ ಸಮಯಕ್ಕಾಗಿ ಕಾಯುತ್ತಿದ್ದ ಅವರು ಊರಿನತ್ತ ತೆರಳುವ ಖುಷಿ ಒಂದೆಡೆಯಾದರೆ, ಕೆಎಸ್‌ಆರ್‌ಟಿಸಿ ಉಚಿತ ಬಸ್‌ ಸೌಲಭ್ಯ ಕಲ್ಪಿಸಿರುವುದು ಖುಷಿಯನ್ನು ಇಮ್ಮಡಿಗೊಳಿಸಿತು.


ಶಾಸಕ ವಿ. ಸುನಿಲ್‌ ಕುಮಾರ್‌, ತಹಶೀಲ್ದಾರ್‌ಗಳಾದ ಪುರಂದರ ಹೆಗ್ಡೆ, ಮಹೇಶ್ಚಂದ್ರ, ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಕಂದಾಯ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ವಲಸೆ ಕಾರ್ಮಿಕರನ್ನು ಬೀಳ್ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next