Advertisement

ಕಾರ್ಕಳ ಎಪಿಎಂಸಿ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಕೋವಿಡ್ ನಿಂದ ನಿಧನ

10:18 AM Jun 22, 2021 | Team Udayavani |

ಕಾರ್ಕಳ: ಕಾರ್ಕಳ ಎಪಿಎಂಸಿ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ (65) ಕೋವಿಡ್ ಕಾರಣದಿಂದ ನಿಧನರಾಗಿದ್ದಾರೆ.

Advertisement

ಬೆಳ್ಮಣ್ ರೋಟರಿಯ ಸಕ್ರಿಯ ಸದಸ್ಯರಾಗಿದ್ದ ಇವರು ಬೆಳ್ಮಣ್ ಬೋರ್ಡ್ ಶಾಲೆಯ ಬಳಿ ಕೃಷ್ಣ ಪ್ರಸಾದ ನಿಲಯ ನಿವಾಸಿ. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.ಬಿಜೆಪಿ ಬೆಳ್ಮಣ್ ಘಟಕದ ಮಾಜಿ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿದ್ದರು.ಇದೀಗ ಕೋವಿಡ್ ಗೆ ಬಲಿಯಾಗಿದ್ದು, ಪತ್ನಿ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ರೋಟರಿ ಕ್ಲಬ್ ಬೆಳ್ಮಣ್ ನ ಕ್ರಿಯಾಶೀಲ ಸದಸ್ಯರಾಗಿದ್ದ ಇವರು, ನಂದಳಿಕೆ ಬೋರ್ಡ್ ಶಾಲೆ, ಬೆಳ್ಮಣ್ ಸರಕಾರಿ ಪ್ರೌಢಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ:  ನಿತೀಶ್ ಕುಮಾರ್ ಬಿಟ್ಟು ಹೋದಾಗ ನಾವು ನಿಮ್ಮ ಜೊತೆಯಿದ್ದೆವು: ಬಿಜೆಪಿಗೆ ನೆನಪು ಮಾಡಿದ ಚಿರಾಗ್

ಮೋಹನ್ ದಾಸ್ ಶೆಟ್ಟಿ  ನಿಧನಕ್ಕೆ ಕಾರ್ಕಳ ಶಾಸಕ ವಿ .ಸುನಿಲ್ ಕುಮಾರ್, ಬೆಳ್ಮಣ್ ಪಂಚಾಯತ್ ಅಧ್ಯಕ್ಷ ಜನಾರ್ದನ ತಂತ್ರಿ, ಉಪಾಧ್ಯಕ್ಷೆ ಸಹನಾ ಕುಂದರ್, ರೋಟರಿ ಅಧ್ಯಕ್ಷ ಸುಭಾಷ್ ಕುಮಾರ್, ಬಂಟರ ಸಂಘದ ಅಧ್ಯಕ್ಷ ಸುಹಾಸ್ ಹೆಗ್ಡೆ ಮತ್ತಿತರರು ಸಂತಾಪ ವ್ಯಕ್ತ ಪಡಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next