Advertisement

ಕರಿಯಮ್ಮ ದೇವಿ ಜಾತ್ರೆ ಆರಂಭ

09:48 AM Jan 29, 2019 | |

ಚಿತ್ರದುರ್ಗ: ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದ ಶ್ರೀ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಸೋಮವಾರ ಗಂಗಾಪೂಜೆಯೊಂದಿಗೆ ವಿಧ್ಯುಕ್ತವಾಗಿ ಆರಂಭಗೊಂಡಿತು.

Advertisement

ಕರಿಯಮ್ಮ ದೇವಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಹೊಳೆಪೂಜೆಗೆ ಕೊಂಡೊಯ್ದು ಭಕ್ತರು ಗಂಗಾಪೂಜೆ ನೆರವೇರಿಸಿದರು. ಹೊಳೆಪೂಜೆ ಸಂದರ್ಭದಲ್ಲಿ 101 ಎಡೆಗಳನ್ನು ಹಾಕಿ ಪ್ರತಿಯೊಂದು ಜಾತಿ, ಧರ್ಮ, ಕೈವಾಡದವರಿಗೆ ಎಡೆ ನೀಡಲಾಯಿತು. ಗಂಗಾಪೂಜೆ ನಂತರ ಗ್ರಾಮಕ್ಕೆ ತೆರಳಿ ದೇವತೆಗೆ ಕಂಕಣಧಾರಣೆ ಮಾಡಲಾಯಿತು. ಘಟ ಮತ್ತು ಭಾನ ಪೂಜೆ ನೆರವೇರಿದವು. ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ರಾತ್ರಿ ಹರಿಯಬ್ಬೆ ಪಾಳ್ಯ ಗ್ರಾಮಸ್ಥರು ‘ದೇವಿ ಮಹಾತ್ಮೆ’ ನಾಟಕ ಪ್ರದರ್ಶಿಸಿದರು.

ಇಂದಿನ ಕಾರ್ಯಕ್ರಮ: ಜ. 29 ರಂದು ಸಂಜೆ ಗ್ರಾಮಕ್ಕೆ ಸರಗ ಹಾಕಲಾಗುತ್ತದೆ. ನಂತರ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಚಿತ್ರದುರ್ಗದ ಲಾಸಿಕಾ ಫೌಂಡೇಶನ್‌ ವತಿಯಿಂದ ಶ್ರೀಕೃಷ್ಣ ಲೀಲೋತ್ಸವ ನೃತ್ಯರೂಪಕ ಹಾಗೂ ಉತ್ತರ ಕನ್ನಡ ಜಿಲ್ಲೆ ಕಾನಸೂರು ಗ್ರಾಮದ ವಿದುಷಿ ಶ್ವೇತಾ ಭಟ್ ಅವರಿಂದ ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯ ಪ್ರದರ್ಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next