ಹುಬ್ಬಳ್ಳಿ: ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ಖಂಡಿಸಿ, ವೇದಿಕೆ ಕಾರ್ಯಕರ್ತರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ ಅವರ ವಾಹನಕ್ಕೆ ಅಡ್ಡಲಾಗಿ ಮಲಗಿ ಪ್ರತಿಭಟಿಸಿದರು.
ಸಚಿವರು ಇಲ್ಲಿನ ಕಿಮ್ಸ್ ನಲ್ಲಿ ಪ್ರಗತಿ ಪರಿಶೀಲನೆ ಸಭೆ ಮುಗಿಸಿ ಹೊರ ಬರುತ್ತಿದ್ದಾಗ ಕಪ್ಪುಪಟ್ಟಿ ಪ್ರದರ್ಶಿಸಿದ ಕಾರ್ಯಕರ್ತರು, ಸಚಿವರ ವಿರುದ್ದ ಘೋಷಣೆ ಕೂಗಿದರು.
ಸಚಿವರ ವಾಹನಕ್ಕೆ ಅಡ್ಡಲಾಗಿ ಮಲಗುವ ಮೂಲಕ ಸಚಿವರ ಸಂಚಾರಕ್ಕೆ ತಡೆಯೊಡ್ಡಿದರು. ತಕ್ಷಣವೇ ಮಧ್ಯಪ್ರವೇಶಿಸಿದ ಪೊಲೀಸರು, ಪ್ರತಿಭಟನಾಕಾ ರರನ್ನು ಸರಿಸಿ ಸಚಿವರ ಸಂಚಾರಕ್ಕೆ ದಾರಿ ಮಾಡಿ ಕೊಟ್ಟರು.
ಇದನ್ನೂ ಓದಿ:ರಾಮದುರ್ಗ: ಮಕ್ಕಳಿಗೆ ಕ್ರಿಮಿನಾಶಕ ಕುಡಿಸಿ ದಂಪತಿ ಆತ್ಮಹತ್ಯೆ
ಕರವೇ ನಾರಾಯಣಗೌಡ ಬಗ್ಗೆ ಹಗುರವಾಗಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಅವರಿಗೆ ಕರವೇ ನಾರಾಯಣ ಬಣ ಕಾರ್ಯಕರ್ತರು ಕಿಮ್ಸ್ ಆವರಣದಲ್ಲಿ ಕಪ್ಪುಬಟ್ಟಿ ಪ್ರದರ್ಶಿಸಿ, ಅವರ ಕಾರಿಗೆ ಅಡ್ಡ ಮಲಗಿ ಪತ್ರಿಭಟಿಸಿದರು.
ಇದನ್ನೂ ಓದಿ: ಮಂಗಳೂರು ಗೋಲಿಬಾರ್ ಗೆ ಪ್ರತೀಕಾರ: ಪೊಲೀಸ್ ಸಿಬ್ಬಂದಿ ಕೊಲೆ ಯತ್ನದ ಹಿಂದೆ ‘ಮಾಯಾ ಗ್ಯಾಂಗ್’