Advertisement

ಕರಾವಳಿಯಲ್ಲಿ ಮುಂದುವರಿದ ಮಳೆ

05:30 PM Oct 24, 2019 | Naveen |

ಕಾರವಾರ: ಉತ್ತರ ಕನ್ನಡ ಕರಾವಳಿಯಲ್ಲಿ ಮಳೆ ಮುಂದುವರಿದಿದೆ. ಕಾರವಾರದಲ್ಲಿ ಬೆಳಗಿನಿಂದ ಮಧ್ಯಾಹ್ನವರೆಗೆ ಧಾರಾಕಾರ ಮಳೆ ಸುರಿಯಿತು. ಮೀನುಗಾರರು ಸಮುದ್ರಕ್ಕೆ ಇಳಿಯಲಿಲ್ಲ. ಕದ್ರಾ, ಅಣಶಿ ಭಾಗದಲ್ಲಿ ಮಳೆ ಜೋರಾಗಿದ್ದು, ಅಣೆಕಟ್ಟುಗಳಿಂದ ಅಲ್ಪ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗಿದೆ. ಕದ್ರಾದಿಂದ ಬುಧವಾರ ಮಧ್ಯಾಹ್ನದ ನಂತರ 21 ಸಾವಿರ ಕ್ಯೂಸೆಕ್‌ ನೀರನ್ನು ಕಾಳಿ ನದಿಗೆ ಬಿಡಲಾಗಿದೆ. ಜನ ಜಾನುವಾರುಗಳಿಗೆ ತೊಂದರೆ ಆಗದಂತೆ ನೀರು ಹೊರಬಿಡಲಾಗುತ್ತಿದ್ದು. ಕದ್ರಾ ಜಲಾಶಯದಲ್ಲಿ ನೀರನ ಮಟ್ಟ 32 ಮೀಟರ್‌ ಮುಟ್ಟದಂತೆ ನಿರಂತರವಾಗಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಕದ್ರಾ ಜಲಾಶಯದ ಗರಿಷ್ಠ ಮಟ್ಟ 34.50 ಮೀಟರ್‌ ಇದ್ದು,
31.95 ಮೀಟರ್‌ ತನಕ ಜಲಾಶಯದ ಮಟ್ಟ ತಲುಪಿದೆ.

Advertisement

ನಿರಂತರ ವಿದ್ಯುತ್‌ ಉತ್ಪಾದನೆ ಜೊತೆಗೆ, ನೀರನ್ನು ನದಿಗೆ ಬಿಡಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 160.2 ಮಿಮೀ ಮಳೆಯಾಗಿದ್ದು, ಸರಾಸರಿ 14.6 ಮಿಮೀ ಮಳೆ ದಾಖಲಾಗಿದೆ. ಅಕ್ಟೋಬರ್‌ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 152 ಮಿಮೀ ಇದ್ದು, ಇದುವರೆಗೆ ಸರಾಸರಿ ಪ್ರಮಾಣ 277.8 ಮಿಮೀ ಮಳೆ ದಾಖಲಾಗಿದೆ. ಈ ಅವಧಿಯಲ್ಲಿ ಅಂಕೋಲಾದಲ್ಲಿ 13.4 ಮಿಮೀ, ಭಟ್ಕಳ 12.2 ಮಿಮೀ, ಹಳಿಯಾಳ 4.2, ಹೊನ್ನಾವರ 27.1 ಮಿಮೀ, ಕಾರವಾರ 27.2 ಮಿಮೀ, ಕುಮಟಾ 6.6 ಮಿಮೀ, ಮುಂಡಗೋಡ 40.6 ಮಿಮೀ, ಸಿದ್ದಾಪುರ 5.4 ಮಿಮೀ, ಶಿರಸಿ 9.5 ಮಿಮೀ, ಜೊಯಿಡಾ 3 ಮಿಮೀ, ಯಲ್ಲಾಪುರ 11 ಮಿ ಮೀ ಮಳೆ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next