Advertisement

Mangaluru ಡಾ| ನಾ. ಸೋಮೇಶ್ವರ ಅವರಿಗೆ “ಕಾರಂತ ಪ್ರಶಸ್ತಿ’

12:35 AM Sep 17, 2023 | Team Udayavani |

ಮಂಗಳೂರು: ಚಂದನ ವಾಹಿನಿಯಲ್ಲಿ 4 ಸಾವಿರ ಕಂತುಗಳನ್ನು ಪೂರೈಸಿರುವ “ಥಟ್ಟಂತ ಹೇಳಿ’ ಕಾರ್ಯಕ್ರಮದ ಮೂಲಕ ಜನಮಾನಸಕ್ಕೆ ಚಿರಪರಿಚಿತರಾಗಿರುವ ಡಾ| ನಾ. ಸೋಮೇಶ್ವರ ಅವರನ್ನು “ಕಾರಂತ ಪ್ರಶಸ್ತಿ – 2023’ಕ್ಕೆ ಆಯ್ಕೆ ಮಾಡಲಾಗಿದೆ.

Advertisement

ಅವರು ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಬೆಳೆಸಿಕೊಂಡು 30ಕ್ಕೂ ಹೆಚ್ಚು ವಿವಿಧ ವಿಷಯಾಧರಿತ ಪುಸ್ತಕಗಳನ್ನು ಬರೆದಿದ್ದಾರೆ. ಅಕ್ಟೋಬರ್‌ 10ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್‌. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next