Advertisement

Kapu; ವಿವಾಹಿತೆಗೆ ವರದಕ್ಷಿಣೆ ಕಿರುಕುಳ : ದೂರು ದಾಖಲು

09:09 PM Jan 30, 2024 | Team Udayavani |

ಕಾಪು: ವಿವಾಹಿತೆಗೆ ಪತಿ ಮತ್ತು ಅವರ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿರುವುದರ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮಲ್ಲಾರು ಗ್ರಾಮದ ಆಯಿಶಾ ಫರೀನ್‌ ಗಂಡನ ಮನೆಯವರಿಂದ ಕಿರುಕುಳ ಅನುಭವಿಸುತ್ತಿರುವ ಮಹಿಳೆ. ಆಯಿಶಾ 2017ರಲ್ಲಿ ಕೊಂಬುಗುಡ್ಡೆಯ ಪರ್ವೇಜ್‌ನೊಂದಿಗೆ ಕೊಪ್ಪಲಂಗಡಿಯ ಕಮ್ಯೂನಿಟಿ ಹಾಲ್‌ನಲ್ಲಿ ವಿವಾಹವಾಗಿದ್ದು 20 ದಿನಗಳ ಬಳಿಕ ಪತಿ ಒಮಾನ್‌ಗೆ ತೆರಳಿದ್ದನು. ಆ ಸಮಯದಲ್ಲಿ ಪತಿಯ ತಂದೆ ಶುಕೂರ್‌, ತಾಯಿ ಜೋಹರಾಬಿ, ಮೈದುನ ಫಾರೂಕ್‌, ನಾದಿನಿ ಅನ್ಹೋದಾ, ಫೈಸಲ್‌ ಮತ್ತು ಫರ್ಹಾನ್‌ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಕಿರುಕುಳ ನೀಡಿದ್ದು, ಫಾರೂಕ್‌ ಕೂಡ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತವರು ಮನೆಯಿಂದ ಇನ್ನೂ ಚಿನ್ನ ಮತ್ತು ಹಣವನ್ನು ತಂದುಕೊಡು, ಇಲ್ಲದಿದ್ದರೆ ಮನೆಯಲ್ಲಿ ಇರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೊಡೆಯುತ್ತಿದ್ದರು. ಮಾತ್ರವಲ್ಲದೇ ಸುಮಾರು 6 ಲಕ್ಷ ರೂ. ಗಳಷ್ಟು ಚಿನ್ನವನ್ನು ಮಾರಾಟ ಮಾಡಿಸಿ ಹಣ ಪಡೆದುಕೊಂಡಿದ್ದಾರೆ.

ಈ ನಡುವೆ ಪತಿ ಮೂರು ಸಲ ಒಮಾನ್‌ಗೆ ಕರೆಸಿಕೊಂಡು ಅಲ್ಲಿ ಕೂಡ ದೈಹಿಕ, ಮಾನಸಿಕ ಹಿಂಸೆ ನೀಡಿದ್ದು, ತಲಾಕ್‌ ಕೊಡುತ್ತೇನೆ ಎಂದು ಬೆದರಿಕೆ ಹಾಕಿದ್ದನು. ಕಳೆದ 6 ವರ್ಷಗಳಿಂದ ಖರ್ಚಿಗೂ ಹಣ ಕೊಡದೇ, ಮಾನಸಿಕ, ದೈಹಿಕ ಹಿಂಸೆ ನೀಡುತ್ತಿರುವುದಾಗಿ ಆಯಿಶಾ ಫರೀನ್‌ ಕಾಪು ಪೊಲೀಸ್‌ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next