Advertisement

ಶಿವಮೊಗ್ಗ: ಮಳೆಗಾಗಿ ಕಪಿಲೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದ ವೇಳೆ ಸುರಿದ ಮಳೆ

08:33 PM Jun 20, 2023 | Team Udayavani |

ಶಿವಮೊಗ್ಗ: ಮಲೆನಾಡಿನಲ್ಲಿ ರೈತರು ಮಳೆಗಾಗಿ ಪೂಜೆ ಸಲ್ಲಿಸುವ ವೇಳೆ ವರುಣ ದೇವ ಕೃಪೆ ತೋರಿ ಮಳೆ ಸುರಿದ ಪ್ರಸಂಗ ಶಿವಮೊಗ್ಗ ಜಿಲ್ಲೆಯ ಹನಸವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಮಳೆಯಾಗಲಿಲ್ಲ ಎಂದು ಗ್ರಾಮಸ್ಥರು ಮೇಲಿನ ಹಸನವಾಡಿ ಗ್ರಾಮದ ಕಪಿಲೇಶ್ವರ ಸ್ವಾಮಿ ದೇವಾಲಯದಲ್ಲಿ ಮುದ್ದೆ ಪಾರಾವ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ವೇಳೆ ಏಕಾಏಕಿ ಮಳೆ ಸುರಿಯಲು ಆರಂಭವಾಗಿದೆ, ಮಳೆ ಸುರಿಯುತ್ತಿದ್ದಂತೆ ಗ್ರಾಮದ ಜನ ದೇವಸ್ಥಾನದ ಗಂಟೆ ಬಾರಿಸುತ್ತಾ ಸಂಭ್ರಮಿಸಿದರು.

Advertisement

ರಾತ್ರಿಯಿಡೀ ಭಜನೆ, ಬೆಳಿಗ್ಗೆ ಗಂಗೆಪೂಜೆ, ಅಭಿಷೇಕ ನಡೆಸಿದ ವೇಳೆ ವರುಣ ದೇವರು ಗ್ರಾಮದ ಜನರ ಮೊರೆಗೆ ಕೃಪೆ ತೋರಿದ್ದಾನೆ ಮಳೆಯ ರಭಸಕ್ಕೆ ದೇವಸ್ಥಾನದ ಎದುರು ಹಾಕಿದ್ದ ಶಾಮಿಯಾನ ಕುಸಿದು ಬಿದ್ದಿದೆ.

ಬರದ ಸಂದರ್ಭದಲ್ಲಿ ಹಿಂದಿನಿಂದಲೂ ವಿಶೇಷ ಸಂಪ್ರದಾಯ ಆಚರಿಸಿಕೊಂಡು ಬಂದಿರುವ ಗ್ರಾಮಸ್ಥರು ಈ ಬಾರಿಯೂ ಮಳೆ ಬಾರದೆ ಇರುವುದರಿಂದ ದೇವರ ಮೊರೆ ಹೋಗಿದ್ದಾರೆ. ದೇವಾಲಯದ ಬಳಿಯೇ ಮುದ್ದೆ ತಯಾರಿಸಿ, ದೇವರಿಗೆ ನೈವೇದ್ಯ ಇಟ್ಟು ಪೂಜೆ ಸಲ್ಲಿಸುವ ವೇಳೆ ಮಳೆರಾಯ ಪ್ರವೇಶ ಮಾಡಿದ್ದಾನೆ ಇದರಿಂದ ಗ್ರಾಮದ ಜನ ಕುಣಿದು ಕುಪ್ಪಳಿಸಿದ್ದಾರೆ.

ಇದನ್ನೂ ಓದಿ: ಕುಷ್ಟಗಿ ಪೊಲೀಸರ ಕಾರ್ಯಾಚರಣೆ: ಶ್ರೀಗಂಧ ಕಳ್ಳರ ಬಂಧನ, ಸೊತ್ತುಗಳು ವಶ

Advertisement

Udayavani is now on Telegram. Click here to join our channel and stay updated with the latest news.

Next