Advertisement

ಕಾಂತಾವರ: ಚಿರತೆ ದಾಳಿ,ಸೆರೆ

12:35 AM Feb 16, 2019 | Team Udayavani |

ಬೆಳ್ಮಣ್‌: ಕಾರ್ಕಳ ತಾಲೂಕಿನ ಕಾಂತಾವರ ದೇಗುಲದ ಪಕ್ಕದ ಅಂಬಲಪದವು ಎಂಬಲ್ಲಿ ಶುಕ್ರವಾರ ಚಿರತೆಯೊಂದು
ಇಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಕೊನೆಗೂ ಚಿರತೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿರತೆಯನ್ನು ಪಿಲಿಕುಳ ನಿಸರ್ಗಧಾಮಕ್ಕೆ ಒಯ್ಯಲಾಗಿದೆ. ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಶುಕ್ರವಾರ ಬೆಳಗ್ಗೆ ಸ್ಥಳೀಯ ನಿವಾಸಿ ಸುಂದರ ಪೂಜಾರಿ ಅವರ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದ ಚಿರತೆ ಸುಮಾರು 10 ಗಂಟೆ ಹೊತ್ತಿಗೆ ಮೀನ ಪೂಜಾರಿ¤ ಎಂಬವರ ಮೇಲೂ ದಾಳಿ ನಡೆಸಿತ್ತು.  ಈ ಚಿರತೆ ಕಳೆದ ಮೂರು-ನಾಲ್ಕು ದಿನಗಳಿಂದ ಈ ಪರಸರದಲ್ಲಿ ಓಡಾಡುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಹಿಂದೆಯೂ ಚಿರತೆಯ ಬಂಧನಕ್ಕೆ ಬೋನು ಅಳವಡಿಸಿದ್ದರೂ ಯಶಸ್ವಿಯಾಗಿರಲಿಲ್ಲ. 

ಅರಣ್ಯ ಇಲಾಖೆಯ ಎಸಿಎಫ್‌ ಅಜ್ಜಪ್ಪ, ಮೂಡಬಿದ್ರೆ ರೇಂಜ್‌ ಆಫೀಸರ್‌ ಪ್ರಕಾಶ್‌ ಪೂಜಾರಿ, ಇಲಾಖೆಯ ಅಶ್ವಿ‌ತ್‌, ಮಂಜುನಾಥ, ಕಾಂತಾವರ ಗ್ರಾ.ಪಂ. ಅಧ್ಯಕ್ಷ ರಾಜೇಶ್‌ ಕೋಟ್ಯಾನ್‌, ಮಾಜಿ ಅಧ್ಯಕ್ಷ ಜಯ ಕೋಟ್ಯಾನ್‌, ಗ್ರಾಮಸ್ಥರಾದ ಭರತ್‌, ನಿತೇಶ್‌, ಲೋಕೇಶ್‌, ವಾಸು ಶೆಟ್ಟಿ, ಗುರುಪ್ರಸಾದ್‌ ಸಹಿತ ನೂರಾರು ಮಂದಿ ಚಿರತೆಯ ಬಂಧನಕ್ಕೆ ಸಹಕರಿಸಿದ್ದರು.

ಉರುಳಿಗೆ ಬಿದ್ದ ಚಿರತೆ ಸಾವು
ಮಣಿಪಾಲ: ಪೆರ್ಣಂಕಿಲ ಸಮೀಪದ ಅಂಗಾರಕಟ್ಟೆ ಕೇನೆಕುಂಜದಲ್ಲಿ ಶುಕ್ರವಾರ ಉರುಳಿಗೆ ಬಿದ್ದಿದ್ದ 4 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆ ಸಿಬಂದಿ ಉರುಳಿನಿಂದ ಬಿಡಿಸಿ ಸೆರೆ ಹಿಡಿಯುವ ಪ್ರಯತ್ನದ ವೇಳೆ ಮೃತಪಟ್ಟಿದೆ. ಚಿರತೆಯ ಸೊಂಟದ ಭಾಗ ಉರುಳಿನಲ್ಲಿ ಸಿಲುಕಿಕೊಂಡಿತ್ತು. ಅರಿವಳಿಕೆ ತಜ್ಞರು ಲಭ್ಯರಾಗದ್ದರಿಂದ ಇಲಾಖೆ ಸಿಬಂದಿಗೆ ಸುಲಭವಾಗಿ ಬಿಡಿಸಲು ಸಾಧ್ಯವಾಗಲಿಲ್ಲ.
 

Advertisement

Udayavani is now on Telegram. Click here to join our channel and stay updated with the latest news.

Next