Advertisement
ಮಳೆ ನೀರಿನ ಜತೆ ರಾಜಕಾಲುವೆ ನೀರು ಕೂಡ ಸೇರಿಕೊಂಡಿದ್ದರಿಂದ ಕಂಠೀರವ ಒಳಾಂಗಣ ಕ್ರೀಡಾಂಗಣ ಅಕ್ಷರಶಃ ಜಲಾವೃತಗೊಂಡಿದೆ. ಕೆಲ ದಿನಗಳ ಹಿಂದಷ್ಟೇ 3.80 ಕೋಟಿ ರೂ. ಖರ್ಚು ಮಾಡಿ ಕಂಠೀರವ ಮೇಲ್ದರ್ಜೆಗೇರಿಸಲಾಗಿತ್ತು. ಹೊಸ ಮರದ ಹಾಸು ಗಳನ್ನು ಹಾಕಲಾಗಿತ್ತು. ಮಳೆ ನೀರಿನಿಂದ ಇವೆಲ್ಲ ಹಾನಿಗೊಳಗಾಗಿವೆ. ಅಲ್ಲದೇ ಹೊರಾಂಗಣ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ಗೂ ತೀವ್ರ ಹಾನಿಯಾಗಿದೆ ಎನ್ನಲಾಗಿದೆ. ಮೇಲ್ದರ್ಜೆಗೇರಿಸಲ್ಪಟ್ಟ ಮೇಲೂ ಆಗಿರುವ ದುಃಸ್ಥಿತಿಗೆ ಕ್ರೀಡಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಗೇರಿಸಲಾಗಿತ್ತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಂಗಣ ವೀಕ್ಷಿಸಿದ್ದರು. ಈ ಸಲ ಕಾಮಗಾರಿ ಸಂಪೂರ್ಣ ಗೊಂಡಿದೆ. ಚರಂಡಿ ನೀರು ಅಥವಾ ಮಳೆ ನೀರು ನುಗ್ಗಲು ಸಾಧ್ಯವೇ ಇಲ್ಲ. ಬಿಬಿಎಂಪಿ ಸಹಯೋಗದೊಂದಿಗೆ ಪರಿಹಾರ ಕಂಡುಕೊಂಡಿದ್ದೇವೆ ಎಂದು ಬೆನ್ನಲ್ಲೇ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೇಳಿತ್ತು. ಈಗ ಮತ್ತೆ ಮಳೆ ನೀರು ನುಗ್ಗಿ ಅನಾಹುತ ನಡೆದಿದೆ. ಈ ಬಗ್ಗೆ ಯಾರ ಬಳಿಯೂ ಉತ್ತರವಿಲ್ಲ.
Related Articles
Advertisement
ಕ್ರೀಡಾ ಹಾಸ್ಟೇಲ್ಗೂ ನುಗ್ಗಿದ ನೀರು: ಅನಾಹುತ ಪ್ರಮಾಣ ಎಷ್ಟಿತ್ತೇಂದರೆ ಪಕ್ಕದ ಕ್ರೀಡಾ ಹಾಸ್ಟೆಲ್ಗೂ ನೀರು ನುಗ್ಗಿದೆ. ಇದರಿಂದ ವಸತಿ ಶಾಲೆಯಲ್ಲಿರುವ ಕ್ರೀಡಾ ಪಟುಗಳು ಕೂಡ ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ.
ಯಾಕೆ ಹೀಗೆ ನೀರು ನಿಲ್ಲುತ್ತದೆ?ಕಂಠೀರವ ಕ್ರೀಡಾಂಗಣ ತಗ್ಗು ಪ್ರದೇಶದಲ್ಲಿದೆ. ಮಳೆ ಬಂದಾಗ ರಸ್ತೆ ನೀರು ಕ್ರೀಡಾಂಗಣಕ್ಕೆ ನುಗ್ಗುತ್ತದೆ. ಜತೆಗೆ ಅಲ್ಲೇ ಪಕ್ಕದಲ್ಲಿರುವ ರಾಜಕಾಲುವೆಯಲ್ಲಿ ನೀರು ತುಂಬಿ ತುಳುಕುತ್ತದೆ. ಹೀಗಾಗಿ ಕ್ರೀಡಾಂಗಣದಿಂದ ಹೊರ ಹೋಗುವ ನೀರಿಗೆ ಇಲ್ಲಿ ಜಾಗ ಸಿಗುವುದಿಲ್ಲ. ಇದು ಚರಂಡಿ ನೀರಿನೊಂದಿಗೆ ಸೇರಿ ತನ್ನ ಪ್ರಮಾಣ ಹೆಚ್ಚಿಸಿಕೊಂಡು ಕ್ರೀಡಾಂಗಣದೊಳಗೆ ನುಗ್ಗುತ್ತದೆ.