Advertisement

ಕಣ್ಣೂರು: ಕೊಡಯೇರಿ ಬಾಲಕೃಷ್ಣನ್ ಬ್ಯಾನರ್ ತೆಗೆದ ಪೊಲೀಸ್ ಅಧಿಕಾರಿ ಎತ್ತಂಗಡಿ

04:30 PM Oct 09, 2022 | Team Udayavani |

ಕಣ್ಣೂರು: ದಿವಂಗತ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಕಟ್ಟಿದ್ದ ಬ್ಯಾನರ್ ಹಾಗೂ ಬೋರ್ಡ್ ಗಳನ್ನು ತೆಗೆದು ಹಾಕಿದ ನ್ಯೂ ಮಾಹಿ ಎಸ್ಐ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

Advertisement

ನ್ಯೂ ಮಾಹಿ ಎಸ್‍ಐ ವಿಪಿನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಕೊಡಿಯೇರಿ ಅವರ ಫ್ಲೆಕ್ಸ್ ಬೋರ್ಡ್ ಗಳನ್ನು ನಾಶಪಡಿಸಲಾಗಿದೆ ಎಂಬ ಸಿಪಿಎಂ ಕಾರ್ಯಕರ್ತರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಎಸ್‍ಐ ವಿಪಿನ್ ಅವರನ್ನು ಕಾನೂನು ಸುವ್ಯವಸ್ಥೆ ಉಸ್ತುವಾರಿಯಿಂದ ವರ್ಗಾವಣೆ ಮಾಡಲಾಗಿದೆ. ಎಸ್‍ಐ ಅವರನ್ನು ಕಣ್ಣೂರು ಡಿಎಚ್‍ಕ್ಯೂಗೆ ವರ್ಗಾವಣೆ ಮಾಡಲಾಗಿದೆ. ಕಣ್ಣೂರು ನಗರ ಪೊಲೀಸ್ ಆಯುಕ್ತರು ಈ ಕ್ರಮ ಕೈಗೊಂಡಿದ್ದಾರೆ. ಮಹೇಶ್ ಕಡಂಬತ್ ನ್ಯೂಮಾಹಿಯ ನೂತನ ಎಸ್‍ಐ ಆಗಲಿದ್ದಾರೆ.

ಮೊನ್ನೆ ಪೊಲೀಸರು ಈಂಗಳ್ ಪೀಟಿಗ ಸೇರಿದಂತೆ ರಸ್ತೆ ಬದಿ ಹಾಕಿದ್ದ ಫ್ಲೆಕ್ಸ್ ಬೋರ್ಡ್, ಬ್ಯಾನರ್ ತೆಗೆಸಿದ್ದರು. ಬೆಳಗ್ಗೆ ಮಾಹಿತಿ ತಿಳಿದ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು.

ಪ್ರತಿಭಟನೆ ಹಿಂಸಾಚಾರಕ್ಕೆ ಬದಲಾದಾಗ ಪೋಲೀಸರು ಬೋರ್ಡ್‍ಗಳನ್ನು ಅದೇ ಸ್ಥಳದಲ್ಲಿ ಹಾಕುವುದಾಗಿ ಒಪ್ಪಿಕೊಂಡರು. ನಂತರ ಸಿಪಿಎಂ-ಡಿವೈಎಫ್‍ಐ ಕಾರ್ಯಕರ್ತರು ಬೋರ್ಡ್‍ಗಳು ಮತ್ತು ಬ್ಯಾನರ್‍ಗಳನ್ನು ಹಿಂಪಡೆದು ವಾಪಸಾದರು. ಘಟನೆಯಲ್ಲಿ ನ್ಯೂಮಾಹಿ ಪೊಲೀಸರ ವಿರುದ್ಧ ಡಿವೈಎಫ್ ಐ ಉತ್ತರ ಪ್ರಾಂತ ಕಾರ್ಯದರ್ಶಿ ಶೈನ್ ಕುಮಾರ್ ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next