Advertisement

ಕನ್ನಡ ನವತಾರ ಕಲಾಮಂಡಳಿ ಮಲಾಡ್‌: ಸಾಧಕರಿಗೆ ಸಮ್ಮಾನ

12:11 PM Mar 23, 2017 | Team Udayavani |

ಮುಂಬಯಿ: ಕನ್ನಡ ನವತಾರ ಕಲಾಮಂಡಳಿಯು ಮಲಾಡ್‌ ಪಶ್ಚಿಮದ ಸೋಮವಾರ ಬಜಾರ್‌ನ ಶ್ರೀ ಪಾಟ್ಲಾದೇವಿ ಮಂದಿರದ ಹೊರಾಂಗಣ ಸಭಾಗೃಹದಲ್ಲಿ ಮಾ. 19ರಂದು ಆಯೋಜಿಸಿದ್ದ 44ನೇ ವಾರ್ಷಿಕ ಮಹಾಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಸಾಧಕರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

Advertisement

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಡಾ| ಸತೀಶ್‌ ಬಿ. ಶೆಟ್ಟಿ ಮತ್ತು ಅನಿತಾ ಶೆಟ್ಟಿ, ಮನ್ಮಥ ಆರ್‌. ಹೆಗ್ಡೆ ಮತ್ತು ಮೋಹಿನಿ ಹೆಗ್ಡೆ ದಂಪತಿಗಳು, ಇನ್ನಂಜೆ ಚಂದ್ರಹಾಸ ಗುರುಸ್ವಾಮಿ, ಉದ್ಯಮಿ ಕೃಷ್ಣ ಎ. ಪೂಜಾರಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಗೌರವಿಸಲಾಯಿತು.

ವೇದಿಕೆಯಲ್ಲಿ ಮಹಾರಾಷ್ಟÅ ಮಾನವ ಸೇವಾ ಸಂಘದ ಅಧ್ಯಕ್ಷ ಡಾ| ಹರೀಶ್‌ ಬಿ. ಶೆಟ್ಟಿ, ದಹಿಸರ್‌ ಕರ್ನಾಟಕ ಸಂಘದ ಅಧ್ಯಕ್ಷ ನಿಟ್ಟೆ ಎಂ. ಜಿ. ಶೆಟ್ಟಿ, ಮಹಾರಾಷ್ಟ್ರ ಒಕ್ಕಲಿಗ ಸಂಘದ ಅಧ್ಯಕ್ಷ ರಂಗಪ್ಪ ಸಿ. ಗೌಡ, ಸಂಸ್ಥೆಯ ಸಂಸ್ಥಾಪಕ ಟಿ. ಕೆ. ದಿವಾಕರ ಶೆಟ್ಟಿಗಾರ್‌, ಸಂಸ್ಥೆಯ ವ್ಯವಸ್ಥಾಪಕ ಟಿ. ಕೆ. ಕೋಟ್ಯಾನ್‌, ಸ್ಥಳೀಯ ನಗರ ಸೇವಕಿ ಯೋಗಿತಾ ಸುನೀಲ್‌ ಕೋಲಿ, ಬಿಜೆಪಿ ಕಾರ್ಯಕರ್ತ ರವೀಂದ್ರ ಭಟ್‌, ಮಲಾಡ್‌ ಕನ್ನಡ ಸಂಘದ ಅಧ್ಯಕ್ಷ ಹರೀಶ್‌ ಎನ್‌. ಶೆಟ್ಟಿ, ಪ್ರೇಮಾ ಕೋಟ್ಯಾನ್‌, ತನುಜಾ ಪೂಜಾರಿ, ಅಧ್ಯಕ್ಷ ಹರೀಶ್ಚಂದ್ರ ಹೆಗ್ಡೆ, ಉದ್ಯಮಿ ಜಯಂತ್‌ ಎಸ್‌. ಶೆಟ್ಟಿ, ರಂಗನಟ ಗುಣಪಾಲ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.  

ಚಿತ್ರ-ವರದಿ : ರಮೇಶ್‌ ಉದ್ಯಾವರ
 

Advertisement

Udayavani is now on Telegram. Click here to join our channel and stay updated with the latest news.

Next