Advertisement

ಕನ್ನಡ ಕಲಾಕೇಂದ್ರ ಮುಂಬಯಿ 11ನೇ ವಾರ್ಷಿಕ ಯಕ್ಷೋತ್ಸವ-2019

12:30 AM Feb 23, 2019 | |

ಮುಂಬಯಿ: ಯಕ್ಷಗಾನ ವನ್ನು ಉಳಿಸಿ-ಬೆಳೆಸುವಲ್ಲಿ  ಶ್ರೀ ಇಡ ಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇವರ ಕೊಡುಗೆ ಅಪಾರವಾಗಿದೆ. ಕೆರೆಮನೆ ಯವರು ಪಾರಂಪಾರಿಕವಾಗಿ ಯಕ್ಷಗಾನಕ್ಕೆ ವಿಶೇಷ ಕೊಡುಗೆಯನ್ನು ನೀಡಿ, ಕಲೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದ ಕೀರ್ತಿ ಈ ತಂಡಕ್ಕೆ ಲಭಿಸುತ್ತದೆ. ಕಲೆ-ಕಲಾವಿದರನ್ನು ಪೋಷಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಎಂ. ನರೇಂದ್ರ ಅವರು ನುಡಿದರು.

Advertisement

ಫೆ. 21 ರಂದು ವಡಾಲ ಶ್ರೀ ರಾಮಮಂದಿರದಲ್ಲಿ ಕನ್ನಡ ಕಲಾಕೇಂದ್ರ ಮುಂಬಯಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ, ಗೋಕರ್ಣ ಪರ್ಥಗಾಳಿ ಜೀವೋತ್ತಮ ಮಠ ವಡಾಲ ಇವರ ಪ್ರಾಯೋಜಕತ್ವದಲ್ಲಿ ನಡೆದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇವರ 11 ನೇ ಯಕ್ಷೋತ್ಸವ-2019 ಕ್ಕೆ ಚಾಲನೆ ನೀಡಿ ಮಾತನಾಡಿದ ಇವರು, ಯಕ್ಷಗಾನವು ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸುವುದಲ್ಲದೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಾ ಬಂದಿದೆ. ಇಂದಿನ ಕಾಲಘಟ್ಟದಲ್ಲಿ ಯುವಜನತೆ ಯಕ್ಷಗಾನದತ್ತ ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ನಾನು ಯಕ್ಷಗಾನಕ್ಕೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದೇನೆ. ಭವಿಷ್ಯದಲ್ಲೂ ನನ್ನ ಸಹಕಾರ, ಪ್ರೋತ್ಸಾಹ ಸದಾಯಿದೆ ಎಂದು ನುಡಿದರು.

ಇನ್ನೋರ್ವ ಅತಿಥಿ ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಮಂಡಳದ ಮಾಜಿ ಕಾರ್ಯಾಧ್ಯಕ್ಷ ಎನ್‌. ಎನ್‌. ಪಾಲ್‌ ಇವರು ಮಾತನಾಡಿ, ಕನ್ನಡ ಕಲಾಕೇಂದ್ರವು ಮುಂಬಯಿ ಯ ವಿವಿಧೆಡೆಗಳಲ್ಲಿ ಊರಿನ ಪ್ರಸಿದ್ಧ ಕಲಾತಂಡವನ್ನು ಆಹ್ವಾನಿಸಿ ಕಲಾಸೇ ವೆಗೈಯುವುದರ ಮೂಲಕ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರು ವುದು ಶ್ಲಾಘನೀಯ ಎಂದರು.

ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ತಂಡದ ಪರವಾಗಿ ಮಾತನಾಡಿದ ಶ್ರೀಧರ ಹೆಗ್ಡೆ, ಯಕ್ಷಗಾನವನ್ನು ಉತ್ತಮ ರೀತಿಯಲ್ಲಿ, ಶಿಸ್ತುಬದ್ಧವಾಗಿ ಪ್ರದರ್ಶಿಸಿ ಮುಂದಿನ ಪೀಳಿಗೆಗೂ ಕಲೆಯ ಬಗ್ಗೆ ಅರಿವನ್ನು ಮೂಡಿಸಬೇಕು ಎಂಬುವುದು ನಮ್ಮ ಉದ್ಧೇಶವಾಗಿದೆ. ನಮಗೆ ಈ ಅವಕಾಶವನ್ನು ನೀಡಿದ ಕನ್ನಡ ಕಲಾಕೇಂದ್ರ ಮತ್ತು ಇತರ ಆಯೋಜಕರಿಗೆ, ಪ್ರಾಯೋಜಕರಿಗೆ, ಮುಂಬಯಿಯ ಕಲಾಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಂಕಣಿ ರಂಗಕರ್ಮಿ, ವಡಾಲ ಶ್ರೀರಾಮ ಮಂದಿರ ಮಠದ ವಕ್ತಾರ ಕಮಲಾಕ್ಷ ಸರಾಫ್‌ ಇವರು, ವಡಾಲ ಶ್ರೀ ರಾಮ ಮಂದಿರವು ಯಕ್ಷಗಾನ ಕಲೆಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ. ಭವಿಷ್ಯದಲ್ಲೂ ಯಕ್ಷಗಾನ ಕಲೆ ಹಾಗೂ ಕಲಾವಿದರಿಗೆ ನಮ್ಮ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದು ನುಡಿದರು.

ಪ್ರಾರಂಭದಲ್ಲಿ ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಯಕ್ಷೋತ್ಸವಕ್ಕೆ ಚಾಲನೆ ನೀಡಿದರು. ಜಿಎಸ್‌ಬಿ ಮಂಡಳದ ವಿಶ್ವಸ್ಥ  ಶಾಂತಾರಾಮ ಭಟ್‌ ಇವರು ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಸಮಿತಿಯ ಸದಸ್ಯರುಗಳಾದ ಜಿ. ಎಂ. ಕಾಮತ್‌ ಮಾತನಾಡಿ ಕಲಾವಿದರನ್ನು ಅಭಿನಂದಿಸಿದರು. ಕನ್ನಡ ಕಲಾಕೇಂದ್ರ ದ ಕಾರ್ಯದರ್ಶಿ ಮಧುಸೂ ದನ್‌ ಟಿ. ಆರ್‌. ಅವರು ಕಾರ್ಯಕ್ರಮ ನಿರ್ವಹಿಸಿದರು. ಯಕ್ಷಗಾನ ವಿಭಾಗದ ಕಾರ್ಯಾಧ್ಯಕ್ಷ ರಮೇಶ್‌ ಬಿರ್ತಿ ವಂದಿಸಿದರು. ಪ್ರಾರಂಭದಲ್ಲಿ ಇತ್ತೀಚೆಗೆ ಜಮ್ಮು ಕಾಶ್ಮೀರಾದಲ್ಲಿ ನಡೆದ ಉಗ್ರರ ಪೈಶಾಚಿಕ ಕೃತಕ್ಕೆ ಹುತಾತ್ಮರಾದ ವೀರ ಯೋಧರಿಗೆ ಹಣತೆ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ  ಶ್ರೀ ಇಡಗುಂಜಿ   ಮಹಾಗಣಪತಿ  ಯಕ್ಷಗಾನ ಮಂಡಳಿ ಕೆರೆಮನೆ ಕಲಾವಿದರುಗಳಿಂದ ಸೀತಾಪಹರಣ ಯಕ್ಷಗಾನ ಪ್ರದರ್ಶನ ಗೊಂಡಿತು. ಶಿವಾನಂದ ಹೆಗಡೆ ಇವರ ನಿರ್ದೇಶನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿಮ್ಮೇಳದಲ್ಲಿ ಭಾಗವತ ರಾಗಿ ದಂತಳಿಕೆ ಅನಂತ ಹೆಗಡೆ, ಮದ್ದಳೆಯಲ್ಲಿ ಮೂರುರು ನರಸಿಂಹ ಹೆಗಡೆ, ಚೆಂಡೆಯಲ್ಲಿ ಕೃಷ್ಣಯಾಜಿ ಇಡಗುಂಜಿ, ಕಲಾವಿದರುಗಳಾಗಿ ಶ್ರೀಪಾದ ಹೆಗಡೆ ಹಡಿನಬಾಳ, ಕೆರೆಮನೆ ಶಿವಾನಂದ ಹೆಗಡೆ, ಶಿರಳಗಿ ತಿಮ್ಮಪ್ಪ ಹೆಗಡೆ, ಈಶ್ವರ್‌ ಭಟ್‌ ಹೊಸಳ್ಳಿ, ಚಂದ್ರಶೇಖರ್‌ ಎಸ್‌., ಕೆರೆಮನೆ ಶ್ರೀಧರ ಹೆಗಡೆ, ವಿನಾಯಕ ನಾಯ್ಕ ಅವರು ಭಾಗವಹಿಸಿದ್ದರು.  ಸ್ತಿÅàಪಾತ್ರದಲ್ಲಿ ಸದಾಶಿವ ಭಟ್‌ ಯಲ್ಲಾಪುರ,  ಗಣಪತಿ ಕುಣಬಿ,  ನಕುಲ್‌ ಗೌಡ, ಹಾಸ್ಯದಲ್ಲಿ ಸೀತಾರಾ ಮ ಹೆಗಡೆ ಮುಡಾಕಿ ಇವರು ಪಾಲ್ಗೊಂಡಿದ್ದರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹರಿಸಿದರು. 

 ಯಕ್ಷಗಾನವು ನಮ್ಮ ಶ್ರೀಮಂತ ಕಲೆಯಾ ಞಗಿದ್ದು, ಯಕ್ಷಗಾನ ಅಕಾಡೆಮಿ ಯನ್ನು ಸ್ಥಾಪಿಸುವುದರ ಮೂಲಕ ಯಕ್ಷಗಾನಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ಯಕ್ಷಗಾನವು  ಕೇವಲ ಜಾನಪದ ಕಲೆಯಲ್ಲ, ಇದರಲ್ಲಿ ಅನೇಕ ವಿಶೇಷತೆಗಳಿದ್ದು, ಧಾರ್ಮಿಕ ಚಿಂತನೆಯನ್ನು ಮೂಡಿಸಲು ಯಕ್ಷಗಾನ ಸಹಕಾರಿಯಾ ಗುತ್ತಿದೆ. ಮುಂಬಯಿಯಲ್ಲಿ ಯಕ್ಷೋತ್ಸವದ ಮೂಲಕ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ನಿಮ್ಮೆಲ್ಲರ ಕಲಾಭಿಮಾನ ಅಭಿನಂದನೀಯ.
 – ಡಾ| ಸುನೀತಾ ಎಂ. ಶೆಟ್ಟಿ ,ಹಿರಿಯ ಸಾಹಿತಿ

ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next