Advertisement
ರಾಜಾಜಿನಗರ ವಿಧಾನಸಭೆ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, “ಅಕ್ಷರ ಲೋಕದಲ್ಲಿ ಇದ್ದವರು ಮಾತ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕು ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಕನ್ನಡತನಕ್ಕೆ ಧಕ್ಕೆ ಉಂಟಾದಾಗ ರಕ್ಷಣೆಗೆ ಮೊದಲು ಬರುವವರು ಕನ್ನಡ ಪರ ಹೋರಾಟಗಾರರು. ಅವರೇಕೆ ಸಮ್ಮೇಳನದ ಅಧ್ಯಕ್ಷರಾಗಬಾರದು ಎಂದು ಪ್ರಶ್ನಿಸಿದರು.
Related Articles
Advertisement
ಶಿವನಗರ ವೃತ್ತದಲ್ಲಿ ಹಬ್ಬದ ಸಂಭ್ರಮ: ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ರಾಜಾಜಿನಗರದ ಶಿವನಗರ ವೃತ್ತ ಮತ್ತು ವರಕವಿ ದ.ರಾ.ಬೇಂದ್ರೆ ರಸ್ತೆಯಲ್ಲಿ ಹಬ್ಬದ ಕಳೆ ಕಂಡುಬಂತು. ಬಸವೇಶ್ವರ ನಗರದ ಶಾರದಾ ಕಾಲೊನಿ ಮೂಲಕ ಹೊರಟ ಸಮೇಳನಾಧ್ಯಕ್ಷರ ಮೆರೆವಣಿಗೆ ಜಾನಪದ ಸಂಭ್ರಮಕ್ಕೆ ಸಾಕ್ಷಿಯಾಯಿತು.
ತೆರದ ವಾಹನದಲ್ಲಿ ಸಮ್ಮೇಳನಾಧ್ಯಕ್ಷರ ಮೆರೆವಣಿ ನಡೆದರೆ ಹುಲಿ ಕುಣಿತ, ಗೊಂಬೆ ಕುಣಿತ ಸೇರಿದಂತೆ ಇನ್ನಿತರ ಜಾನಪದ ಕಲಾವಿದರು ಮೆರವಣಿಗೆಗೆ ಮೆರುಗು ನೀಡಿದರು. ಅತಿಥಿಗಳಿಗೆ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ದೊರೆಯಿತು.
ಪರಭಾಷಿಕರಿಗೆ ಕನ್ನಡ ಕಲಿಸಿ: “ನಗರಕ್ಕೆ ಬರುವ ಪರಭಾಷಿಗರಿಗೆ ಕನ್ನಡ ಕಲಿಯಲು ಸರ್ಕಾರೇತರ ಸಂಸ್ಥೆಗಳು ಮುಂದಾಗಬೇಕು. ಉಚಿತ ಕನ್ನಡ ಕಲಿಕೆಗಾಗಿ ಸಂಜೆ ಶಾಲೆಗಳನ್ನು ತೆರೆಯಬೇಕು ಆಗ ಮಾತ್ರ ಸಿರಿಗನ್ನಡಂಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂಬುವುದಕ್ಕೆ ಅರ್ಥ ಬರುತ್ತದೆ. ನಾನಾ ಕಾರಣಗಳಿಂದಾಗಿ ನಗರಕ್ಕೆ ಆಗಮಿಸುವವರಿಗೆ ಕನ್ನಡ ಕಲಿಸುವ ಕೆಲಸ ನಡೆಯಬೇಕು,’ ಎಂದು ಸಮ್ಮೇಳನಾಧ್ಯಕ್ಷ, ಚಿತ್ರ ನಿರ್ದೇಶಕ ಎಸ್.ಕೆ. ಭಗವಾನ್ ಹೇಳಿದರು.
ಚಿತ್ರರಂಗಕ್ಕೂ ಕನ್ನಡ ಪರ ಹೋರಾಟಕ್ಕೂ ಅವಿನಾಭಾವ ಸಂಬಂಧವಿದೆ. ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡ ಡಾ.ರಾಜ್ಕುಮಾರ್ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಿದರು. ಈಗ ಅವರು ಇದ್ದಿದ್ದರೆ ಮಹಾದಾಯಿ, ಎತ್ತಿನ ಹೊಳೆ, ಕಾವೇರಿ ಸೇರಿದಂತೆ ಹಲವು ಜಂಟಿಲ ಸಮಸ್ಯೆಗಳು ಕೊನೆಗೊಳ್ಳುತ್ತಿದ್ದವು.-ಎಸ್.ಕೆ.ಭಗವಾನ್, ಸಮ್ಮೇಳನಾಧ್ಯಕ್ಷರು ಕನ್ನಡತನಕ್ಕೆ ಧಕ್ಕೆಯಾದರೆ ಮೊದಲು ರಕ್ಷಣೆಗೆ ಬರುವವರು ಕನ್ನಡ ಪರ ಹೋರಾಟಗಾರರು. ಕೆಲವರು ಕನ್ನಡ ನೆಲ, ಜಲ, ಭಾಷೆ ಉಳಿವಿಗೆ ಜೀವನವನ್ನೇ ಮುಡಿಪಿಟ್ಟಿದ್ದಾರೆ. ಅವರೇಕೆ ಸಮ್ಮೇಳನದ ಅಧ್ಯಕ್ಷರಾಗಬಾರದು? ಮೊದಲು ನಮ್ಮಲ್ಲಿರುವ ಭ್ರಮೆ ಕಿತ್ತೆಸೆಯಬೇಕು.
-ಪ್ರೊ. ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ