Advertisement

Kannada cinema; “ಪುರುಷೋತ್ತಮನ ಪ್ರಸಂಗ’ ರಾಜ್ಯಾದ್ಯಂತ ಬಿಡುಗಡೆ

12:57 AM Mar 05, 2024 | Team Udayavani |

ಮಂಗಳೂರು: ರಾಷ್ಟ್ರಕೂಟ ಪಿಕ್ಚರ್ಸ್‌ ಲಾಂಛನದ, ಉದ್ಯಮಿ ವಿ. ರವಿಕುಮಾರ್‌ ನಿರ್ಮಾಣ ಹಾಗೂ “ತೆಲಿಕೆದ ಬೊಳ್ಳಿ’ ದೇವದಾಸ್‌ ಕಾಪಿಕಾಡ್‌ ನಿರ್ದೇಶನದಲ್ಲಿ ತಯಾರಾದ “ಪುರುಷೋತ್ತಮನ ಪ್ರಸಂಗ’ ಕನ್ನಡ ಚಲನಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಚಿತ್ರ ಬಿಡುಗಡೆ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯಿತು.

Advertisement

ಮಂಗಳೂರಿನ ಭಾರತ್‌ ಮಾಲ್‌ನ ಬಿಗ್‌ ಸಿನೆಮಾದಲ್ಲಿ ಕಾರ್ಯಕ್ರಮ ನಡೆಯಿತು. ಭುಜಬಲಿ ಧರ್ಮಸ್ಥಳ ಕಾರ್ಯಕ್ರಮ ಉದ್ಘಾಟಿಸಿದರು. ದೇವದಾಸ್‌ ಕಾಪಿಕಾಡ್‌ ತುಳು ನಾಟಕ ಮತ್ತು ತುಳು ಸಿನೆಮಾಗಳ ಮೂಲಕ ಅದ್ವಿತೀಯ ಸಾಧನೆಗೈದವರು. ಈಗ ಪುರುಷೋತ್ತಮನ ಪ್ರಸಂಗ ಸಿನೆಮಾ ವನ್ನು ಕನ್ನಡದಲ್ಲಿ ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೂ ಪರಿಚಯವಾಗುತ್ತಿದ್ದಾರೆ ಎಂದರು.

ವಾರ್ತಾಕಾರಿ ಖಾದರ್‌ ಷಾ ಶುಭ ಹಾರೈಸಿದರು. ನಿರ್ದೇಶಕ ವಿಜಯ ಕುಮಾರ್‌ ಕೊಡಿಯಾಲಬೈಲ್‌ ಮಾತನಾಡಿ ಕಾಪಿಕಾಡ್‌ ತುಳು ಸಿನೆಮಾ ರಂಗದಲ್ಲಿ ಅನೇಕ ಉತ್ತಮ ಸಿನೆಮಾಗಳನ್ನು ನೀಡಿದ್ದಾರೆ. ಈಗ ಕನ್ನಡದಲ್ಲಿ ನಿರ್ದೇಶನ ಮಾಡಿದ ಸಿನೆಮಾ ಸೂಪರ್‌ ಹಿಟ್‌ ಆಗಲಿ ಎಂದರು. ಪ್ರಮುಖರಾದ ಪ್ರಕಾಶ್‌ ಪಾಂಡೇಶ್ವರ, ಕಿಶೋರ್‌ ಕೊಟ್ಟಾರಿ, ಗಿರೀಶ್‌ ಶೆಟ್ಟಿ, ಸಾಯಿ ಕೃಷ್ಣ ಕುಡ್ಲ, ಮೈಮ್‌ ರಾಮ್‌ ದಾಸ್‌, ಸದಾಶಿವ ಅಮೀನ್‌, ದೇವದಾಸ್‌ ಕಾಪಿಕಾಡ್‌, ಶರ್ಮಿಳಾ ಕಾಪಿಕಾಡ್‌, ನಾಯಕ ನಟ ಅಜಯ್‌ ಪೃಥ್ವಿ, ನಾಯಕಿ ರಿಷಿಕಾ ನಾಯಕ್‌, ಜ್ಯೋತಿಷ್‌ ಶೆಟ್ಟಿ, ಅರ್ಜುನ್‌ ಕಾಪಿಕಾಡ್‌, ಸಂದೀಪ್‌ ಶೆಟ್ಟಿ, ಅಬೂಬಕರ್‌ ಪುತ್ತು ಉಪ್ಪಿನಂಗಡಿ, ರಶೀದ್‌ ವಿಟ್ಲ ಮುಂತಾದವರು ಉಪಸ್ಥಿತರಿದ್ದರು.ಲಕ್ಷ್ಮೀಶ ಸುವರ್ಣ ಸ್ವಾಗತಿಸಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next