Advertisement

Kannada Cinema; ಮಾರ್ಚ್ ನಲ್ಲಿ ‘ಅಗ್ನಿಲೋಕ’

06:58 PM Feb 15, 2024 | Team Udayavani |

ನವನಟ ಯಶಸ್ವಾ ನಾಯಕರಾಗಿರುವ “ಅಗ್ನಿಲೋಕ’ ಚಿತ್ರ ಸೆನ್ಸಾರ್‌ ಪಾಸಾಗಿದ್ದು ಯು/ಎ ಪ್ರಮಾಣ ಪತ್ರ ನೀಡಲಾಗಿದೆ.

Advertisement

ಚಿತ್ರವನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ. ಈ ಚಿತ್ರಕ್ಕೆ ಯಶಸ್ವಾ ತಂದೆ ರಾಜೇಶ್‌ ಮೂರ್ತಿ ಅವರೇ ಆಕ್ಷನ್‌ ಕಟ್‌ ಹೇಳಿದ್ದಾರೆ. ಎಮೋಷನಲ್‌ ಹಾಗೂ ಆಕ್ಷನ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಚಿತ್ರ ಅಗ್ನಿಲೋಕ.

ಈ ಹಿಂದೆ ಲಿಪ್ಸ್‌ ಸ್ಟಿಕ್‌ ಮರ್ಡರ್‌, ಜೋಕರ್‌ ಚಿತ್ರಗಳನ್ನು ಮಾಡಿರುವ ರಾಜೇಶ್‌ ಮೂರ್ತಿ ಈಗ “ಅಗ್ನಿಲೋಕ’ ಮಾಡಿದ್ದಾರೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿ ಸಂಕಲನದ ಕೆಲಸವನ್ನೂ ನಿರ್ವಹಿಸಿದ್ದಾರೆ.

ಬೆಂಗಳೂರು, ಕೆಜಿಎಫ್, ಮಂಡ್ಯ, ಚಿಕ್ಕಮಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ವಿಷ್ಣು ಪುಷ್ಪ ಫಿಲಂಸ್‌ ಪುಷ್ಪ ಮಂಜುನಾಥ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಂಜುಶ್ರೀ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next