Advertisement

ಜಗತ್ತು ಚಿಕ್ಕದು, ಸಿಟ್ಟು ಶಾಶ್ವತವಲ್ಲ; ಸುದೀಪ್‌

03:53 PM May 03, 2018 | Team Udayavani |

“ನೀವು ಹಾಗೂ ದರ್ಶನ್‌ ಯಾವತ್ತೂ ಸಿನಿಮಾ ಮಾಡುತ್ತೀರಿ’ ಎಂದು ಕೆಲವು ದಿನಗಳ ಹಿಂದೆ ಅಭಿಮಾನಿಯೊಬ್ಬರು ಸುದೀಪ್‌ ಅವರಿಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಸುದೀಪ್‌, “ನಾವಿಬ್ಬರು ಯಾವತ್ತಿಗೂ ಸ್ನೇಹಿತರೇ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕಾಗ ಖಂಡಿತಾ ಮಾಡುತ್ತೇವೆ’ ಎಂಬರ್ಥದಲ್ಲಿ ಟ್ವೀಟ್‌ ಮಾಡಿದ್ದರು ಸುದೀಪ್‌. 

Advertisement

ಹಾಗಾದರೆ ಮುಂದೆ ಸುದೀಪ್‌ ಮತ್ತು ದರ್ಶನ್‌ ಒಂದಾಗುತ್ತಾರಾ, ಜೊತೆಗೆ ಸಿನಿಮಾ ಮಾಡುತ್ತಾರಾ ಎಂಬ ಪ್ರಶ್ನೆ ಅನೇಕರನ್ನು ಕಾಡಿತ್ತು. ಈಗ ಸುದೀಪ್‌ ಮಾತನಾಡಿದ್ದಾರೆ. “ಈ ಜಗತ್ತಲ್ಲಿ ನಾವು ಎಷ್ಟು ದಿನ ಇರುತ್ತೇವೋ ಅಷ್ಟು ದಿನ ಎಲ್ಲರೂ ಸ್ನೇಹಿತರಾಗಿ, ಖುಷಿಯಿಂದ ಇರಬೇಕು. ಯಾರಲ್ಲೂ ದ್ವೇಷ ಕಟ್ಟಿಕೊಂಡು, ಸಿಟ್ಟನ್ನು ಮುಂದುವರೆಸಿಕೊಂಡು ಹೋಗಬಾರದು’ ಎನ್ನುವುದು ಸುದೀಪ್‌ ಮಾತು. ಈ ಮೂಲಕ ಒಳ್ಳೆಯ ಕಥೆ ಸಿಕ್ಕರೆ ದರ್ಶನ್‌ ಜೊತೆ ನಟಿಸಲು ತಮ್ಮದೇನೂ ಅಭ್ಯಂತರವಿಲ್ಲ ಎಂಬುದನ್ನು ಈ ಮೂಲಕ ಸೂಕ್ಷ್ಮವಾಗಿ ಹೇಳಿದ್ದಾರೆ.

ಇನ್ನು,  ಫಾರಿನ್‌ ಟೂರ್‌ ಮುಗಿಸಿಕೊಂಡು ವಾಪಾಸ್‌ ಬಂದಿರುವ ಸುದೀಪ್‌, ಎಂದಿನಂತೆ ಮತ್ತೆ ಸಿನಿಮಾ ಕೆಲಸದಲ್ಲಿ ತೊಡಗಿದ್ದಾರೆ. ಸುದೀಪ್‌ ಸದ್ಯ, “ದಿ ವಿಲನ್‌’ ಡಬ್ಬಿಂಗ್‌ ಹಾಗೂ “ಅಂಬಿ ನಿಂಗೆ ವಯಸ್ಸಾಯೊ¤à’ ಚಿತ್ರೀಕರಣದಲ್ಲಿ ಬಿಝಿ. ಸುದೀಪ್‌ ಫಾರಿನ್‌ ಟೂರ್‌ ಹೋಗಲು ಕಾರಣ ಅವರ ಮಗಳು ಸಾನ್ವಿ. ಬೇಸಿಗೆ ರಜೆಯಲ್ಲಿ ಮಗಳಿಗೆ ವಿದೇಶದ ಹೊಸ ಹೊಸ ಜಾಗಗಳನ್ನು ತೋರಿಸಿಕೊಂಡು ಬಂದಿದ್ದಾರೆ. 

ಸುದೀಪ್‌ ಮಗಳ ಜೊತೆ 16 ದಿನ ಜಪಾನ್‌ಗೆ ಪ್ರವಾಸ ಹೋಗಲು ಆಲೋಚಿಸಿದ್ದರಂತೆ. ಅದಕ್ಕೆ ಕಾರಣ ಜಪಾನ್‌ನ ಹಳ್ಳಿಗಳು. “ಮಗಳನ್ನು ಕರೆದುಕೊಂಡು 16 ದಿನ ಜಪಾನ್‌ ಪ್ರವಾಸ ಹೋಗಬೇಕೆಂದಿದ್ದೆ. ಜಪಾನ್‌ನ ಹಳ್ಳಿಗಳನ್ನು ಆಕೆಗೆ ತೋರಿಸುವ ಆಸೆ ಇತ್ತು. ಆದರೆ, ನನ್ನ ಬಿಝಿ ಶೆಡ್ನೂಲ್‌ನಿಂದ ಸಾಧ್ಯವಾಗಲಿಲ್ಲ. ಕೇವಲ ಆರು ದಿನ ಮಾತ್ರ ಟೂರ್‌ ಹೋಗಿ ಬಂದೆ’ ಎಂದು ಹೇಳುತ್ತಾರೆ ಸುದೀಪ್‌. 

“ದಿ ವಿಲನ್‌’ ಚಿತ್ರದ ಮೂರು ದಿನಗಳ ಚಿತ್ರೀಕರಣ ಬಾಕಿ ಇದೆ. ಈ ನಡುವೆಯೇ “ಅಂಬಿ ನಿಂಗೆ ವಯಸ್ಸಾಯೊ¤à’ ಚಿತ್ರದಲ್ಲಿ ನಟಿಸುತ್ತಿರುವ ಸುದೀಪ್‌, ಅದಕ್ಕಾಗಿ ಏಳೆಂಟು ಕೆಜಿ ತೂಕ ಕೂಡಾ ಇಳಿಸಿಕೊಂಡರಂತೆ. “ಅಂಬರೀಶ್‌ ಅವರಿಗೆ ಕಥೆ ತುಂಬಾ ಇಷ್ಟವಾಗಿದೆ. ಚಿತ್ರೀಕರಣದಲ್ಲಿ ತುಂಬಾ ಉತ್ಸಾಹದಿಂದ, ಖುಷಿಯಿಂದ ಭಾಗವಹಿಸುತ್ತಾರೆ. ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಕೂಡಾ ಮಾಡಿಕೊಂಡಿದ್ದಾರೆ’ ಎನ್ನುವುದು ಸುದೀಪ್‌. 

Advertisement

ಸದ್ಯ ಸುದೀಪ್‌ ಅವರ “ಕೋಟಿಗೊಬ್ಬ-3′ ಚಿತ್ರೀಕರಣ ಆರಂಭವಾಗಿದೆ. ಬೇರೆ ಕಲಾವಿದರಿರುವ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಜೂನ್‌ನಿಂದ ಸುದೀಪ್‌ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next