Advertisement

ಮಡಿಕೇರಿಯಲ್ಲಿ ವೆಂಕಟ್ ಹುಚ್ಚಾಟ ; ಕಾರಿನ ಗಾಜು ಪುಡಿಗಟ್ಟಿ ರಂಪಾಟ

10:01 AM Aug 30, 2019 | Hari Prasad |

ಮಡಿಕೇರಿ: ಇತ್ತೀಚೆಗಷ್ಟೇ ಚೆನ್ನೈನ ಬೀದಿಗಳಲ್ಲಿ ಹರಿದ ಬಟ್ಟೆಯಲ್ಲಿ ಓಡಾಡುತ್ತಿದ್ದ ರೀತಿಯಲ್ಲಿ ಕನ್ನಡ ಚಿತ್ರ ತಂಡವೊಂದರ ಕಣ್ಣಿಗೆ ಬಿದ್ದಿದ್ದ ಕನ್ನಡದ ನಟ ಹುಚ್ಚ ವೆಂಕಟ್ ಅವರು ಇಂದು ಮತ್ತೆ ಮಡಿಕೇರಿಯಲ್ಲಿ ರಂಪಾಟ ಮಾಡಿ ಸುದ್ದಿಯಾಗಿದ್ದಾರೆ.

Advertisement

ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿಯಲ್ಲಿ ಸ್ಥಳೀಯರೊಬ್ಬರ ಕಾರಿನ ಗಾಜನ್ನು ಹುಚ್ಚ ವೆಂಕಟ್ ಅವರು ಪುಡಿಗಟ್ಟಿದ್ದಾರೆ. ಮಾರುತಿ 800 ಕಾರಿನ ಗಾಜಿಗೆ ವೆಂಕಟ್ ಅವರು ಕಲ್ಲೆಸೆದು ಹಾನಿಗೊಳಿಸಿದ್ದಾರೆ. ಮತ್ತು ಬಹಳ ಹೊತ್ತು ಆ ಕಾರಿನ ಬಳಿಯಲ್ಲೇ ವಿಚಿತ್ರ ಹಾವ ಭಾವ ಪ್ರದರ್ಶಿಸುತ್ತಾ ನಿಂತಿದ್ದಾರೆ. ಈ ಎಲ್ಲಾ ಘಟನೆಗಳು ನಡೆಯುತ್ತಿದ್ದರೂ ಅಲ್ಲಿ ಹಾಜರಿದ್ದ ಸ್ಥಳೀಯರು ಮೂಕಪ್ರೇಕ್ಷಕರಾಗಿ ನೋಡುತ್ತಾ ನಿಂತಿದ್ದರು.

ಬಳಿಕ ಅಲ್ಲಿಗೆ ಆಗಮಿಸಿದ ಕಾರಿಗೆ ಸಂಬಂಧಪಟ್ಟವರು ವೆಂಕಟ್ ಗೆ ಥಳಿಸಿದ್ದಾರೆ. ಹುಚ್ಚ ವೆಂಕಟ್ ಅವರ ರಂಪಾಟದ ವಿಡಿಯೋ ಮತ್ತು ಅವರಿಗೆ ಥಳಿಸುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಹುಚ್ಚ ವೆಂಕಟ್ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಕಾರಿನ ಮಾಲಿಕ ದಿಲೀಪ್ ಎಂಬುವವರು ಹೆಳುವ ಪ್ರಕಾರ, ಅವರು ತಮ್ಮ ಕಾರನ್ನು ಎಟಿಎಂ ಹತ್ತಿರ ನಿಲ್ಲಿಸಿ ಹಣ ತೆಗೆಯಲೆಂದು ಒಳಗೆ ಹೋಗಿ ಹೊರಗೆ ಬರುವ ಸಂದರ್ಭದಲ್ಲಿ ವೆಂಕಟ್ ಅವರನ್ನು ನೋಡಿದ್ದಾರೆ. ಇದನ್ನು ತಪ್ಪಾಗಿ ಅರ್ಥಮಾಡಿಕೊಂಡ ವೆಂಕಟ್ ಅವರು ದಿಲೀಪ್ ಅವರ ಬಳಿಗೆ ಬಂದು ‘ನೀನ್ಯಾಕೆ ನನ್ನನ್ನು ಗುರಾಯಿಸಿ ನೋಡ್ತಾ ಇದ್ದೀಯಾ..? ನೀನೇನು ಮಡಿಕೇರಿಯ ಡಾನಾ?’ ಅಂತ ಕೇಳಿ ದಿಲೀಪ್ ಅವರ ಕೆನ್ನೆಗೆ ಬಾರಿಸಿದ್ದಾರೆ. ಆ ಬಳಿಕ ದಿಲೀಪ್ ಅವರ ಕಾರಿನ ಗಾಜುಗಳನ್ನು ಕಲ್ಲಿನಿಂದ ಪುಡಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next