Advertisement

ಮುರಿದು ಬಿದ್ದ ಮದುವೆ : ಮನೆ ಬಿಟ್ಟು ಮಠ ಸೇರಿದ ಬಿಗ್ ನಟಿ ಚೈತ್ರಾ ಕೊಟ್ಟುರ

02:48 PM Jul 22, 2021 | Team Udayavani |

ಬೆಂಗಳೂರು : ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಕವಿಯತ್ರಿ ಹಾಗೂ ಚಲನಚಿತ್ರ ನಟಿ ಚೈತ್ರಾ ಕೊಟ್ಟುರ   ಇಂದು ಗಂಡನ ಜೊತೆ ಹನಿಮೂನ್ ನಲ್ಲಿರಬೇಕಾಗಿತ್ತು. ಆದರೆ, ದುರಾದೃಷ್ಟವೆನ್ನುವಂತೆ ಅವರ ದಾಂಪತ್ಯ ಒಂದೇ ದಿನದಲ್ಲಿ ಮುರಿದು ಬಿತ್ತು. ಪರಿಣಾಮ ಚೈತ್ರಾ ಇದೀಗ ಎಲ್ಲವನ್ನು ಬಿಟ್ಟು ಮಠ ಸೇರಿ ಆಧ್ಯಾತ್ಮಿಕತೆಯತ್ತ ವಾಲಿದ್ದಾರೆ.

Advertisement

ಚೈತ್ರಾ ಅವರು ಇತ್ತೀಚಿಗೆ ಉದ್ಯಮಿ ನಾಗಾರ್ಜುನ್ ಎನ್ನುವರ ಜೊತೆ ಸರಳವಾಗಿ ವಿವಾಹವಾಗಿದ್ದರು. ಎರಡೂ ಕುಟುಂಬಗಳು ಒಪ್ಪದ ಕಾರಣ ಮರು ದಿನವೇ ಅದು ವಿವಾದವಾಗಿ ಕೋಲಾರದ ಮಹಿಳಾ ಠಾಣೆ ಮೆಟ್ಟಿಲೇರಿತ್ತು. ಕೊನೆಗೆ ಮದುವೆ ಮುರಿದು ಬಿತ್ತು. ಇದರಿಂದ ನೊಂದಿದ್ದ ಚೈತ್ರಾ ಆತ್ಮಹತ್ಯೆಗೂ ಯತ್ನಿಸಿದ್ದರು. ಇದೀಗ ಜೀವನದಲ್ಲಿ ನೆಮ್ಮದಿ ಕಾಣಲು ಆಧ್ಯಾತ್ಮಿಕತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಧ್ಯಾನ ಮತ್ತು ಆಧ್ಯಾತ್ಮದ ಕಡೆ ವಾಲಿರುವ ಚೈತ್ರಾ ಕೊಟ್ಟುರ   ಓಶೋ ಧ್ಯಾನ ಮಂದಿರ ಸೇರಿದ್ದಾರೆ. ಬೆಳಗಾವಿಯಲ್ಲಿರುವ ಓಶೋ ಧ್ಯಾನ ಶಿಬಿರದಲ್ಲಿ ಚೈತ್ರಾ ಕೊಟ್ಟುರ   ಪಾಲ್ಗೊಂಡಿದ್ದಾರೆ. ಆಧ್ಯಾತ್ಮದ ಕಡೆ ಆಸಕ್ತಿ ಬೆಳೆಸಿಕೊಂಡಿರುವ ಚೈತ್ರಾ ಚೈತ್ರಾ ಕೊಟ್ಟುರ ತಮ್ಮ ಹೆಸರನ್ನು ‘ಮಾ ಪ್ರಗ್ಯಾ ಭಾರತಿ’ ಎಂದು ಬದಲಾಯಿಸಿಕೊಂಡಿದ್ದಾರೆ.

Advertisement

ಈ ವಿಚಾರವನ್ನು ಸ್ವತಃ ಚೈತ್ರಾ ಕೊಟ್ಟುರ   ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ”ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ.. ಓಶೋ ಧ್ಯಾನ ಶಿಬಿರ” ಎಂದು ಚೈತ್ರಾ ಕೊಟ್ಟುರ   ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ತಮ್ಮ ಗುರುಗಳ ಜೊತೆಗಿನ ಫೋಟೋವನ್ನೂ ಚೈತ್ರಾ ಕೊಟ್ಟುರ   ಹಂಚಿಕೊಂಡಿದ್ದಾರೆ. ಚೈತ್ರಾ ಕೊಟ್ಟುರ   ಆಧ್ಯಾತ್ಮದ ಪಯಣಕ್ಕೆ ಶುಭವಾಗಲಿ ಎಂದು ಅನೇಕರು ಹಾರೈಸಿದ್ದಾರೆ.

ಇನ್ನು ಚೈತ್ರಾ ಕನ್ನಡದ ಬಿಗ್ ಬಾಸ್ 7 ನೇ ಸೀಸನ್ ಸ್ಪರ್ಧಿಯಾಗಿದ್ದರು. ‘ಬಿಗ್ ಬಾಸ್’ ಮನೆಯಿಂದ ಹೊರಗೆ ಬಂದ್ಮೇಲೆ ಕೆಲ ಸಿನಿಮಾಗಳಲ್ಲಿ ಅವಕಾಶ ಪಡೆದಿದ್ದ ಚೈತ್ರಾ ಕೊಟ್ಟುರ ‘ಲಗ್ನ ಪತ್ರಿಕೆ’ ಧಾರಾವಾಹಿಯಲ್ಲೂ ಅಭಿನಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next