Advertisement

ಕನ್ಹಯ್ಯಲಾಲ್‌ ಹತ್ಯೆ: ಆರೋಪಪಟ್ಟಿ ಸಲ್ಲಿಕೆ

10:32 PM Dec 22, 2022 | Team Udayavani |

ಜೈಪುರ: ಜೂ.28ರಂದು ರಾಜಸ್ಥಾನದಲ್ಲಿ ನಡೆದ ಟೈಲರ್‌ ಕನ್ಹಯ್ಯಲಾಲ್‌ ಭೀಕರ ಹತ್ಯೆ ಪ್ರಕರಣ ಸಂಬಂಧ ಗುರುವಾರ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಜೈಪುರದಲ್ಲಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.

Advertisement

ಕನ್ಹಯ್ಯಲಾಲ್‌ ಅವರ ಟೈಲರ್‌ ಶಾಪ್‌ಗೆ ನುಗ್ಗಿದ್ದ ಇಬ್ಬರು ದುಷ್ಕರ್ಮಿಗಳು ಅವರನ್ನು ಭೀಕರವಾಗಿ ಹತ್ಯೆಗೈದಿ ದ್ದಲ್ಲದೇ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಜನರಲ್ಲಿ ಭಯ ಮೂಡಿಸಲು ಯತ್ನಿಸಿದ್ದರು. ಮೊಹಮ್ಮದ್‌ ಪೈಗಂಬರರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿಯ ನೂಪುರ್‌ ಶರ್ಮಾರನ್ನು ಬೆಂಬಲಿಸಿ ಕನ್ಹಯ್ಯಲಾಲ್‌ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು. ಹೀಗಾಗಿ, ಉಗ್ರರ ಗ್ಯಾಂಗ್‌ ಆಗಿ ಕಾರ್ಯಾಚರಿಸುತ್ತಿದ್ದ ಆರೋಪಿ ಗಳು, ಕನ್ಹಯ್ಯಲಾಲ್‌ ವಿರುದ್ಧ ಪ್ರತೀಕಾರ ತೀರಿಸಲು ನಿರ್ಧರಿಸಿ ಈ ಕೃತ್ಯ ಎಸಗಿದ್ದರು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಒಟ್ಟು 11 ಮಂದಿಯನ್ನು ಆರೋಪಿಗಳೆಂದು ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next