Advertisement

ಕಾನಂಗಿ ಬ್ರಹ್ಮವಿಷ್ಣು ಮಹೇಶ್ವರ ದೇಗುಲದ ಮೇಲೆ ಮರ ಬಿದ್ದು ಹಾನಿ

06:00 AM May 30, 2018 | Team Udayavani |

ಮಲ್ಪೆ: ಕುತ್ಪಾಡಿ ಕಾನಂಗಿ ಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದ ಮೇಲೆ ಭಾರಿ ಗಾತ್ರದ ಗೋಳಿ ಮರ ಬಿದ್ದು ದೇವಸ್ಥಾನದ ಮುಖ ಮಂಟಪ ಮತ್ತು ವಾಲಗ ಮಂಟಪ ಹಾನಿಗೊಂಡಿದೆ.

Advertisement

ದೇವಸ್ಥಾನದ ನಾಗನ ಕಟ್ಟೆಯ ಒಳಭಾಗದಲ್ಲಿದ್ದ ಸುಮಾರು 130 ವರ್ಷ ಹಳೆಯದಾದ ಗೋಳಿ ಮರ ಸೋಮವಾರ ರಾತ್ರಿ ಬೀಸಿದ ಗಾಳಿಗೆ ದೇಗುಲದ ಮೇಲೆಯೇ ಉರುಳಿ ಬಿದ್ದಿದೆ. ವಾಲಗ ಮಂಟಪ ಸಂಪೂರ್ಣ ಹಾನಿಗೊಂಡಿದ್ದು ಮುಖ ಮಂಟಪ ಭಾಗಶಃ ಹಾನಿಯಾಗಿದೆ. ಸುಮಾರು 6 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌,  ತಹಶೀಲ್ದಾರ್‌ ಪ್ರದೀಪ್‌ ಕುರೆಡೆಕರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next