Advertisement

ಕನ್ಯೆ ಹುಡುಕಿ ಕೊಡಿ ಸರ್… ಜನಸ್ಪಂದನ ಕಾರ್ಯಕ್ರಮದಲ್ಲೇ ಜಿಲ್ಲಾಧಿಕಾರಿ ಬಳಿ ಯುವಕನ ಮನವಿ

03:38 PM Jun 26, 2024 | Team Udayavani |

ಕನಕಗಿರಿ: ರೈತರ ಮಕ್ಕಳಿಗೆ ಕನ್ಯೆ ಹುಡುಕಿ ಕೊಡಿ ಎಂದು ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಯುವಕನೊಬ್ಬ ಮನವಿ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಡೆದಿದೆ.

Advertisement

ಇಂದು(ಬುಧವಾರ) ಕನಕಗಿರಿ ಪಟ್ಟಣದ ಎಪಿಎಂಸಿ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಟ್ಟಣದ ನಿವಾಸಿ ಸಂಗಪ್ಪ ಎಂಬಾತ ಕೊಪ್ಪಳ ಜಿಲ್ಲಾಧಿಕಾರಿ ನಲೀನ್ ಅತುಲ್​ಗೆ ಅರ್ಜಿ ನೀಡಿ, ‘ನಾನು ಕೃಷಿಕ ಕುಟುಂಬಕ್ಕೆ ಸೇರಿದ್ದೇನೆ. ಕಳೆದ ಹತ್ತು ವರ್ಷಗಳಿಂದ ಕನ್ಯಾ ಹುಡುಕುತ್ತಿದ್ದೇನೆ. ಆದ್ರೆ, ಇಲ್ಲಿವರಗೆ ಯಾವುದೇ ಹುಡುಗಿ ಮದುವೆ ಮಾಡಿಕೊಳ್ಳಲು ಒಪ್ಪುತ್ತಿಲ್ಲ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಹೀಗಾಗಿ ಸರ್ಕಾರದಿಂದ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆ ಮೂಲಕ ರೈತರ ಮಕ್ಕಳ ಬಾಳು ಬೆಳಗಲು ನೆರವಾಗಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಯುವಕನ ಮನವಿ ಕೇಳಿ ಶಾಕ್ ಆದ ಜಿಲ್ಲಾಧಿಕಾರಿ, ಈ ಬಗ್ಗೆ ಪರಿಶೀಲನೆ ಮಾಡ್ತೀವಿ ಎಂದು ಹೇಳಿ ಅರ್ಜಿ ಪಡೆದಿದ್ದಾರೆ.

ಇದನ್ನೂ ಓದಿ: Sringeri: ಲಾಡ್ಜ್ ನಲ್ಲಿ ಲೆಡ್ಜರ್ ಪುಸ್ತಕ ಕದ್ದು CCTV ಎದುರು ನೃತ್ಯ ಮಾಡಿದ ಕಳ್ಳ…

Advertisement

Udayavani is now on Telegram. Click here to join our channel and stay updated with the latest news.

Next